ಇನ್ಫೊಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರಕಟ: ವಿ ಗಾಯತ್ರಿ, ಜಯಶ್ರೀ ಕಾಸರವಳ್ಳಿ, ಮಮತಾ ಅವರಿಗೆ ಪ್ರಶಸ್ತಿ

ಉತ್ತರ ಕರ್ನಾಟಕ ಲೇಖಕಿಯರ ಸಂಘ, ಹುಬ್ಬಳ್ಳಿ-ಧಾರವಾಡ
ಇನ್ಫೊಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರಕಟಣೆ

ಉತ್ತರ ಕರ್ನಾಟಕ ಲೇಖಕಿಯರ ಸಂಘವು ಇನ್ಫೊಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ಕೊಡಮಾಡುವ ಮೂರು ವರ್ಷದ ಪ್ರಶಸ್ತಿಗಳು ಪ್ರಕಟಗೊಂಡಿವೆ.

೨೦೧೬ನೇ ಸಾಲಿಗಾಗಿ ವಿ. ಗಾಯತ್ರಿಯವರ ‘ಬದುಕು ಬೇಸಾಯ’ ಜೀವನಚರಿತ್ರೆ, ೨೦೧೭ನೇ ಸಾಲಿಗಾಗಿ ಜಯಶ್ರೀ ಕಾಸರವಳ್ಳಿಯವರ ‘ದಿನಚರಿಯ ಕಡೇ ಪುಟಗಳಿಂದ’ ಕಥಾಸಂಕಲನ ಹಾಗೂ ೨೦೧೮ನೇ ಸಾಲಿಗಾಗಿ ಮಮತಾ ರಾವ್ ಅವರ ‘ಜಯಂತ ಕಾಯ್ಕಿಣಿಯವರ ಕಥನಾವರಣ’ ವಿಮರ್ಶೆ ಕೃತಿಗಳು ಆಯ್ಕೆಗೊಂಡಿವೆ ಎಂದು ಸಂಚಾಲಕರಾದ ಪ್ರಜ್ಞಾ ಮತ್ತಿಹಳ್ಳಿ ಅವರು ತಿಳಿಸಿದ್ದಾರೆ.

ಈಪ್ರಶಸ್ತಿಯು ತಲಾ ೧೦ ಸಾವಿರ ರೂ ನಗದು, ಪ್ರಶಸ್ತಿ ಪತ್ರಿಕೆ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ.

ಡಾ. ಗುರುಲಿಂಗ ಕಾಪಸೆ, ಡಾ. ಜಿ.ಎಮ್.ಹೆಗಡೆ, ಡಾ. ಬಸೂ ಬೇವಿನಗಿಡದ, ಡಾ. ಮಲ್ಲಿಕಾರ್ಜುನ ಹಿರೇಮಠ, ಡಾ. ಲತಾ ಗುತ್ತಿ ಹಾಗೂ ಡಾ. ಶಾಂತಾ ಇಮ್ರಾಪುರ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಮಾರ್ಚ್ ತಿಂಗಳಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜರುಗಲಿದೆ.

 

‍ಲೇಖಕರು avadhi

February 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Sharada

    ಹೃತ್ಪೂರ್ವಕ ಅಭಿನಂದನೆಗಳು ಗಾಯತ್ರಿ. ಕೇಳಿ, ಓದಿ ಬಹಳ ಸಂತೋಷವಾಯ್ತು. ಈ ಪುಸ್ತಕವನ್ನು ನಾನೂ ಓದಬೇಕಲ್ಲ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: