ಇದೀಗ ಕಿತ್ತೆಸೆಯಲಿದ್ದಾರೆ ಗಾಂಧಿಯ ಪೋಟೊ..

ದುರಿತ ಕಾಲದೊಳಗೆ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ಕಾಲ ಕಳೆಯುತ್ತಿಹೆವು

ಪುರಾಣದ ಮಿಥ್ಯ ಕಥೆಗಳನು

ಹಾಡುಗಳೆಂದು ಕೊಂಡ  ಆಕ್ರಂದನಗಳನು

ಸಾವಿರ ಯುದ್ದಗಳ ಗೆಲುವಿನ ಗೋಪುರಗಳಲ್ಲಿ

ಸಮಾಧಿಯಾಗಿ ಹೋದವರ ಕರುಣಾಜನಕ ಪ್ರಲಾಪಗಳನು

ಶತಮಾನಗಳಿಂದಲೂ ಕೇಳುತ್ತ.

ಇದ್ದ ಸೂರ್ಯನನೂ ಮರೆಸುವಂತಹ

ತಮವ ಹೊದ್ದು

ಉಟ್ಟ ಸೀರೆಯ ಬಿಚ್ಚದೇ ಬೆತ್ತಲಾಗಿಸಿ

ಬಗೆದು ನೋಡುವ ಕಾಮಾಂಧತೆಯ ಕಣ್ಣುಗಳನ್ನು

ಉದ್ದುದ್ದ ನಖಗಳನೇ ಕತ್ತಿಯಲುಗನ್ನಾಗಿಸಿ

ತಿವಿಯುವ ಸರದಾರರ ಅವರ ಹೆಂಡಂದಿರ

ಹೆಂಡಂದಿರ ಮಿಂಡಂದಿರ

ಸೆರೆಯಾಳುಗಳಾಗಿ

ಬರುವ ಸೂರ್ಯನ ಕಾಯುವುದನೂ ಮರೆತು

ಮುಸುಕೆಳೆದುಕೊಂಡ ಕತ್ತಲನೇ

ಭಾಗ್ಯ

ಎಂದುಕೊಂಡು

ದಯಪಾಲಿಸಿದ ಭಾಗ್ಯವಿಧಾತನನ್ನು

ಬೆಟ್ಟವೆಂಬ ಅಟ್ಟದ ಮೇಲಿನ ಗರ್ಭಗುಡಿಯೊಳಗಿಟ್ಟು

ಪೂಜುತಿಹೆವು

ನಮ್ಮ ಬಿಡುಗಡೆಗೆ ಬಂದ ಅವತಾರ ಪುರುಷನೆಂದು!

 

ಇದೀಗ ಕಿತ್ತೆಸೆಯಲಿದ್ದಾರೆ

ಬುದ್ದ ಬಸವ ಗಾಂದಿಯ ಹಳೇ ಪೋಟೊಗಳನು

ಬರೆಯಲಿದ್ದಾರೆ ಸಿದ್ದರಾಗಿರಿ

ಓದಲು ಹೊಸ ಇತಿಹಾಸವನು!

‍ಲೇಖಕರು admin

January 30, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. RENUKA ARUN KATHARI Form Belagavi

    ಚಂದದ ಕವಿತೆಯ ಸಾಲುಗಳು ಸರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: