ನಮ್ಮ ನಡುವೆ ಅತಿ ತೀವ್ರವಾದ ರಾಜಕೀಯ ಪ್ರಜ್ಞೆ ಹೊಂದಿರುವ ವ್ಯಂಗ್ಯಚಿತ್ರಕಾರರು ಪಿ ಮಹಮದ್, ಸತೀಶ್ ಆಚಾರ್ಯ ಹಾಗೂ ಎಸ್ ವಿ ಪದ್ಮನಾಭ್. ಇವರ ರೇಖೆಗಳು ಮಲಗಿದ್ದ ಮನಸ್ಸುಗಳನ್ನು ಬಡಿದೆಬ್ಬಿಸಿದೆ. ಹೋರಾಟಗಳಿಗೆ ತಿರುವು ಕೊಟ್ಟಿದೆ. ಮೂರು ಕಾಲಂ ಅಳತೆಯಲ್ಲಿ ಸಂಪಾದಕೀಯಗಳನ್ನೇ ಬರೆದಿದೆ. ಅಷ್ಟೇ ಅಲ್ಲ, ಒಂದು ಪತ್ರಿಕೆ ೧೬-೨೦ ಪುಟದಲ್ಲಿ ಹೇಳಲಾಗದ್ದನ್ನು ಹತ್ತಾರು ಗೆರೆಗಳಲ್ಲೇ ಬಿಸಿ ಮುಟ್ಟುವಂತೆ ಮಂಡಿಸಿದೆ.
ಈ ಪೈಕಿ ಸದ್ಯ ಕುಂದಾಪುರದಲ್ಲಿದ್ದು ದೇಶದ ಅನೇಕ ಮಾಧ್ಯಮಗಳಿಗೆ ವ್ಯಂಗ್ಯ ರೇಖೆ ಒದಗಿಸುತ್ತಿರುವ ಸತೀಶ್ ಆಚಾರ್ಯ ಅವರ ಎರಡು ಕಾಮೆಂಟರಿ ಪ್ರಕಟಿಸುತ್ತಿದ್ದೇವೆ. ಇದು ನೋಡಿದರೆ ನಿಮಗೆ ಗೊತ್ತಾಗುತ್ತೆ ಇದು ‘ಆಯುಧ ಪೂಜೆ ಸ್ಪೆಶಲ್’
0 ಪ್ರತಿಕ್ರಿಯೆಗಳು