ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಸ್ಪತ್ರೆಯ ಮುಂಭಾಗದ 'ಒನ್ ವೇ'..


 
 
 
 
ವೈದ್ಯ ಮತ್ತು ಸಾವು
ಶಿವಕುಮಾರ ಮಾವಲಿ 
 
 
 
 
 
 
 
ದೊಡ್ಡಾಸ್ಪತ್ರೆಯ ದೊಡ್ಡ ಡಾಕ್ಟರಿಗೆ
ರೋಗಿಗಳೆಂದರೆ ಅಷ್ಟಕ್ಕಷ್ಟೆ…
ತಮ್ಮ ಆಸ್ಪತ್ರೆಯ ಮುಂಭಾಗದ ‘ಒನ್ ವೇ’
ಬೋರ್ಡ್ ತೋರಿಸಿ ಆತ ಹೇಳುತ್ತಾನೆ :
‘ ನಮ್ಮದೇನು ತಪ್ಪಿಲ್ಲ ನೋಡಿ! ‘

ಈ ವೈದ್ಯ ಎಂದಿಗೂ ತನ್ನ ವೃತ್ತಿಗೆ
ಎರಡು ಬಗೆದವನಲ್ಲ …
ಖಾಯಿಲೆಗೂ -ಕಾಸಿಗೂ ಮೋಸ ಮಾಡುವಂತಿಲ್ಲ
‘ಅವರ ಕೈಗುಣವೇ ಅಂಥದ್ದು’ ಅಂದವರುಂಟು.
 
ಇಂತಿಪ್ಪ ಇವರಲ್ಲಿಗೆ ಒಮ್ಮೆ ತಮ್ಮದೇ
ಹತ್ತಿರದ ಸಂಬಂಧಿಕ ಬರಲು
ವೈದ್ಯರು ಎಂದಿನಂತೆಯೇ ತಪಾಸಿಸಿದರು.
ಆದರೆ ರೋಗಿ ಬದುಕುಳಿಯಲಿಲ್ಲ.
 
‘ನಮ್ ಡಾಕ್ಟ್ರು ಕೈಮೀರಿ ಪ್ರಯತ್ನಿಸಿದ್ರು
ಅದ್ರೂ ಜೀವ ಹೋಗೇ ಬಿಡ್ತು ‘ ಎಂದನೊಬ್ಬ.
‘ನಮ್ಮವರು ಅಂತ ಇವ್ರ ಹತ್ರ ಬಂದ್ವಿ,
ಏನುಪಯೋಗಾತು ಬಿಡು ‘ ಎಂದ ಮತ್ತೊಬ್ಬ.
 
ಮಧ್ಯಾಹ್ನದ ಊಟಕ್ಕೆಂದು ಮನೆಗೆ ಬಂದ ಡಾಕ್ಟರು
‘ಸಾವಿನ ಸುದ್ದಿ ಕೇಳಿ ಉಂಡರೆಂತು ಒಳಿತು? ‘
ಎಂದು ಹಾಗೇ ಗೋಡೆಗೆ ಒರಗಿದ.
‘ಸಾವು ಸಾಂಕ್ರಾಮಿಕ ಮತ್ತು ಸಾರ್ವತ್ರಿಕ ‘
ಇದನ್ನರಿಯಲು ಡಾಕ್ಟರಿಗೆ ಇಷ್ಟು ದಿನ ಬೇಕಾಯ್ತೆ?
 
ಕಣ್ಮುಚ್ಚಿ ಕಲ್ಪಿಸಿದ ತನ್ನಾಸ್ಪತ್ರೆಗೆ ಮುಂಬರಲಿರುವ
ಸಾವಿನ ಸರತಿ ಸಾಲು …
ತನ್ನಪ್ಪ, ತನ್ನಮ್ಮ …
ಅಣ್ಣ, ತಂಗಿ, ತಮ್ಮ …
ಯಾರು ಬಲ್ಲರು ಯಾರ ಸರತಿ ಯಾವಾಗೆಂದು?
 
ಬೆಚ್ಚಿಬಿದ್ದು ತನ್ನನ್ನು ತಾನೇ
ಸಮಾಧಾನಪಡಿಸುತ್ತ ಹೀಗೆಂದೆಕೊಂಡ :
” ನಾನೇನು ಬರಿ ಸಾವಿಗೆ ಸಾಕ್ಷಿಯಾಗಿಲ್ಲವಿಲ್ಲಿ?
ಹುಟ್ಟುತ್ತಾರೆ ಅಷ್ಟೇ ಮಂದಿ ಸೂತಕದ ಮನೆಯಲ್ಲಿ …”

‍ಲೇಖಕರು avadhi

4 August, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading