ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಗಸದಾಲಾಪ…

ಎಂ ವಿ ಶಶಿಭೂಷಣ ರಾಜು

ನಿಡಿಸುಯ್ದು
ನಿಟ್ಟಿಸುರ ರಾಗದಲಿ
ಭಾವ ಭಾರದ ನೋವಿನಲಿ
ಬಿಕ್ಕಳಿಸಿದ ನೋವು
ಗುಡುಗು ಸಿಡಿಲ ಜೊತೆಗೂಡಿ
ಗೊಳೋ ಎಂದು ಸುರಿಯಿತು ಕಣ್ಣೀರಧಾರೆ
ಆಗಸ ಮೊಗದ ಮೇಘ ಕಣ್ಣಿನಿಂದ

ಎನಿತು ಕಥೆಗಳ ಭಾರದಲಿ
ತಪ್ತ ಮನಗಳ ನೋವಲಿ
ಅಸಂಖ್ಯ ಅತೃಪ್ತ ಜೀವಗಳ ಎದೆಯಲಿ
ಎದೆಯಾಳದ ಭಾವವುಕ್ಕಿ
ಹಲವು  ಕಣ್ಣೀರಧಾರೆ ಜೊತೆಯಾಗಿ
ನದಿಯಾಗುತಿದೆ  

ಗದ್ಗದಿಸಿ ಕಾಲವೆಲ್ಲಾ
ದಳ್ಳಿಸುತ ಮಿಂಚ ಕಾವಿನಲಿ
ನಡುಗುತಲಿ, ಅಡಗಿರುವ ಗುಡುಗರವಕೆ
ನೀರಾವಿಗೆ ಓಲಾಡುತಿರುವ ಸಿಡಿಲ ಸೊಡರಿಗೆ
ದಿಕ್ಕುಗಾಣದೆ ಹಗುರವಾಗಲು
ಬಿಕ್ಕಳಿಸುತಿದೆ

ನಿರುತ್ತವಾಗಿರುವ ನೀರದಮನ
ಗಳಿಗೆ ಗಳಿಗೆಗೆ ರೂಪ ಬದಲಿಸಿ
ಸುತ್ತಿಸುರಳಿ ಆಳದಲಿ
ಸತ್ತಮನಕೆ ಮರುಕ ತೋರಿ
ಕರಗಿ ಹೋಗುತಿದೆ
ಬಾನ ಬಾಳಿನಲಿ

ಜಾರುತಿರುವ ಜಲವಾಗಲಿ
ಸ್ವಚ್ಚಮನಕೆ ಚೇತನ
ಗುಡುಗರವವು ಲಾಲಿಯಾಗಲಿ
ಸುಖನಿದ್ರಕೆ ಗಾಯನ
ಮಿಂಚಬಳ್ಳಿ ದಾರಿಯಾಗಲಿ
ನವಜಗದ ಸಾಧನ
ಸಿಡಿಲ ಸೊಡರು ಉರಿಸಲಿ
ನೋವುಗಳ, ಸುಖಕಾಗಲಿ ಕಾರಣ

‍ಲೇಖಕರು Admin

23 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading