ಅಸಂಗತ…

ರವಿಕಿರಣ್ ಆರ್ ಬಳ್ಳಗೆರೆ

ಸತ್ತ ಕಂಬಳಿಯ ನೇಯುತ್ತಿವೆ ನೆತ್ತರ ನೂಲುಗಳು
ಎಲ್ಲೆಲ್ಲೂ ಹುತ್ತ.. ನಾಗರೆಡೆಯ ನೆರಳು, ರಕ್ತ ರಂಗೋಲಿ
ಅಷ್ಟಮಂಗಲದಲ್ಲಿ ಮೂರೇ ಪ್ರಶ್ನೆ
ನಾನು ಯಾರು..? ನಾನು ಯಾರು…? ನಾನು ಯಾರು…?

ಕಂಬಳಿಯಲ್ಲಿ ಕೂರೆ ಸೂಸಿ, ನಡೆದಿದೆ
ಕನಸುಗಳ ಶವಯಾತ್ರೆ, ಒಣಗಣ್ಣ ತರ್ಪಣ
ಹಸಿದ ಒಡಲಿನ ಕಿಚ್ಚು,
ಕೂಳು ಮಡಿಕೆಯ ಸುಡುತ್ತಿದೆ
ಸಾವಿಗೂ ಇಲ್ಲಿ ಸಾವಿರ ಸುಂಕ
ನಾಗರ ಹೆಡೆಯದ್ದದು ನೆರಳಲ್ಲ, ರಕ್ತ ರಂಗೋಲಿ

ಕೂಗುವ ದನಿಯ ಕೊರಳ ಕೂಯ್ದಿರೊ ರಕ್ತ
ಓಡೋ ಕಾಲಿನ ಬೆರಳು ಕಡಿದಿರೋ ರಕ್ತ
ಕಂಡ ಕನಸುಗಳಿಗೆ ಕಣ್ಣೆದುರೇ ಗರ್ಭಪಾತ
ಅಲ್ಲೆಲ್ಲೋ ಕೊರಗುತ್ತಿದ್ದಾನೆ ಏಕಲವ್ಯ,
ಮತ್ಸರದ ಪ್ರಪಾತ, ನೆನಪುಗಳು ಅಸ್ತಂಗತ
ಅಲ್ಲಾರೋ ಕೂಗಿದರು..
ಇವ ನಮ್ಮವಾ…
ಅಷ್ಟಮಂಗಲದ ಪ್ರಶ್ನೆಗೆ ಇಷ್ಟರಲ್ಲೇ ಉತ್ತರ ಸಿಕ್ಕಿತೇ.
ಆದರೆ..
ಅವರ್ಯಾರು…?

ಹಾವಿನೆಡೆಯ ನೆರಳು… ರಕ್ತ ರಂಗೋಲಿ.

‍ಲೇಖಕರು Avadhi

October 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: