ದೇವದಾಸಿಯ ಸ್ವಗತ
ಶ್ರೀದೇವಿ ಕೆರೆಮನೆ
ಹುಟ್ಟು, ಸಾವು ಎಲ್ಲದಕ್ಕೂ
ಈ ಜಗತ್ತು ಸಾಕ್ಷಿ ಕೇಳುತ್ತಿರುವಾಗ
ನಾನು ಪ್ರೀತಿಸಿದ್ದಕ್ಕೆ ಸಾಕ್ಷಿ ಕೇಳಿದ್ದರಲ್ಲಿ
ನಿನ್ನ ತಪ್ಪೇನೂ ಇಲ್ಲ ಬಿಡು
ಸಾಕ್ಷಿಗಿರಲಿ ಎಂದು ಮುದ್ರೆಯುಂಗುರ ನೀಡಿದ್ದ
ದುಷ್ಯಂತ ಅದನ್ನೇ ಮರೆತು ಕನವರಿಸುತ್ತಿರುವಾಗ
ನಾ ಸಾಕ್ಷಿ ಎಲ್ಲಿಂದ ತರಲಿ?
ನೀ ಕಟ್ಟಿದ್ದ ಗೆಜ್ಜೆಯಂತೂ ಯಾವುತ್ತೋ
‘ಘಲ್’ ಎನ್ನುವ ನಿನಾದವನ್ನು ನಿಲ್ಲಿಸಿ ಬಿಟ್ಟಿರುವಾಗ
ಮತ್ತಾವ ಸಾಕ್ಷಿಯಿದೆ ನನ್ನ ಬಳಿ?
ಬುದ್ಧಿವಂತ ನೀನು
ಬಿಟ್ಟು ಹೊರಡುವಾಗ ಗುಲಗುಂಜಿಯಷ್ಟೂ
ಸಾಕ್ಷಿ ದೊರೆಯದಂತೆ ಮುನ್ನೆಚ್ಚರಿಕೆ ವಹಿಸಿದ
ಹಾ ಚತುರ, ವಾಸ್ತವವಾದಿ
ಆ ಶಕುನಿಗೆ ನೀನೇ ಗುರುವೇ?
ಅಷ್ಟಕ್ಕೂ ನೀನೆಲ್ಲಿ ಸಾಕ್ಷಿಕೊಟ್ಟೆ ನನಗೆ?
ಒಂದು ಹನಿಯೂ ಮೈಗೆ ತಾಗದಂತೆ
ನಾಜೂಕಾಗಿ ಒರೆಸಿ ಎಸೆಯುವಾಗ
ವೀರ್ಯವೂ ಸಾಕ್ಷಿಯಾಗಬಹುದೆಂದೆನಿಸಿತ್ತೇ ನಿನಗೆ?
ನಾನದನ್ನು ರಸಿಕತೆ ಎಂದುಕೊಂಡಿದ್ದೆ..
‘ಹೋಗು ಸ್ನಾನ ಮಾಡು’ ಎಂದು ಒತ್ತಾಯಿಸಿ
ಶವರ್ ಕೆಳಗೆ ನಿಲ್ಲಿಸಿ ಮೈಯ್ಯುಜ್ಜಿದೆಯಲ್ಲ
ನನ್ನ ಮೈಗಂಟಿದ್ದ ನಿನ್ನ ಬೆವರ ಹನಿಯೂ
ಸಾಕ್ಷಿ ಹೇಳಬಹುದೆಂಬ ಅಂಜಿಕೆಯೇ?
ನಾನದನ್ನು ಪ್ರೀತಿ ಎಂದೇ ಭ್ರಮಿಸಿದ್ದೆ
ಹೋಗಲಿ ಬಿಡು,
ಮುರಿದು ಬಿದ್ದ ಕನಸುಗಳನ್ನೆಲ್ಲ
ಮತ್ತೆ ಮತ್ತೆ ನೆನೆಸಿ,
ಮೆಲಕು ಹಾಕಿ ಅಳುತ್ತಿರಲು
ಸಮಯವಾದರೂ ಎಲ್ಲಿದೆ ನನಗೆ?
ಅಲ್ಲಿ ನಿನ್ನಿಂದಲೋ ಅಥವಾ
ಯಾರದ್ದೆಂದೇ ಹೇಳಲಾಗದೆ ಹುಟ್ಟಿದ
ಹೊಟ್ಟೆಗೆ ಬೆನ್ನು ಹತ್ತಿಕೊಂಡ ಮಗು
ತುತ್ತು ಗುಟುಕಿಗಾಗಿ ಬಾಯ್ತೆರೆದು ಚೀತ್ಕರಿಸುತ್ತಿದೆ
ಕೈಗೊಂದಿಷ್ಟು ಕಾಸೆಸೆದು ಬಿಟ್ಟರೆ
ಅದರ ರಾವಣನ ಹೊಟ್ಟೆಗೊಂದಿಷ್ಟು
ಅರೆಕಾಸಿನ ಮಜ್ಜಿಗೆ ಸುರಿಯುತ್ತೇನೆ…
ತೀರಾ ಆಗದು ಎಂದಾದರೆ ಅದನ್ನಾದರೂ ಹೇಳಿಬಿಡು
ನೀನೇ ಕಟ್ಟಿದ್ದ ಗೆಜ್ಜೆಯ ಕಿತ್ತು ತೆಗೆದು, ಮಾರಿ
ಒಂದು ತೊಟ್ಟು ವಿಷವನ್ನಾದರೂ ಖರೀದಿಸಿ
ಅದರ ಬಾಯಿಗಿಡುತ್ತೇನೆ…
ವಿಶಿಷ್ಟ ದನಿಯ ಪದ್ಯ… ಇಷ್ಟವಾಯ್ತು ಶ್ರೀದೇವಿ ಮೇಡಂ…
chennagide.
super
ಕವಿತೆ ಚೆನ್ನಾಗಿದೆ ಮೇಡಂ…
tumba chennagide medom
ಒಂದು ತೊಟ್ಟು ವಿಷವನ್ನಾದ……..-
ಶ್ರೀದೇವಿ ಮೇಡಂ ಕವಿತೆ ಅದ್ಬುತವಾಗಿದೆ.
super.
ಕವಿತೆ ಚೆನ್ನಾಗಿದೆ
Visha koduva vishaadateyinda horabaruva agatya illave?
I liked it
bahala channagide madam…
very..very nice..mana tattuva kavite..!!!
ಕವಿತೆ ಇಷ್ಟವಾಯ್ತು;ಕೊನೆಯ ಎರಡು ಸಾಲುಗಳನ್ನು ಬಿಟ್ಟು.
ಕವಿತೆ ಚೆನ್ನಾಗಿದೆ,ಇಷ್ಟವಾಯ್ತು ಶ್ರೀದೇವಿ ಮೇಡಂ.
VITTAL.
ಸೊಗಸಾಗಿದೆ ಮೇಡಂ….ಬಿತ್ತರವೇ ಹಾಗೇ