ಸಾಗರಿ
ಕೃಷ್ಣ ಶ್ರೀಕಾಂತ ದೇವಾಂಗಮಠ
ಊರಿದ ಪಾದದ ಪ್ರತಿ ಇರಿಸಿ
ಭೋರ್ಗರೆವ ತಾನು ಅಳಿಸಿ
ಲೀನವಾಗಿಸಿಕೊಳ್ಳುತ್ತದೆ
ಬದುಕಿನ ಪಾಠ ಹೇಳಿಕೊಡುತ್ತಲೇ
ನಾನೊಬ್ಬ ಶಿಷ್ಯ ಗುರು ತೋರುತ್ತಾನೆ
ಒಡಲಲ್ಲಿ ರಹಸ್ಯಗಳ ಹುದುಗಿಸಿಟ್ಟುಕೊಂಡು
ತಟದಲ್ಲಿ ಪುಟ್ಟ ಪಾದಗಳು ಗೂಡು ಕಟ್ಟುತ್ತವೆ
ತೆರೆ ಆಟಕ್ಕೆ ತೆರೆ ಎಳೆಯುತ್ತದೆ
ಹಠಕ್ಕೆ ಬಿದ್ದವರು ಅದೇ ಮರಳಲ್ಲಿ ಮತ್ತೆ ಮನೆ ಕಟ್ಟಿನಿಲ್ಲಿಸುತ್ತಾರೆ
ಬದುಕಿನ ಸ್ಥಿರತೆ ಪ್ರಶ್ನಿಸಿ ಅಲೆ ಚಿಪ್ಪುಗಳ ದಡಕ್ಕೆಸೆಯುತ್ತದೆ
ಮಳೆಗರೆದ ಮೋಡ ಮಾಯವಾದಾಗ
ಆವಿಯಾಗುತ್ತಾಳೆ ಕಡುಕಪ್ಪುಗಟ್ಟುತ್ತಾಳೆ
ತೇಲಿ ಸಾಗಿ ಇನ್ನೇಲ್ಲೋ ಇಬ್ಬನಿಯಾಗಿ
ಮೂಲದವರಿಗೆಲ್ಲ ಸುದ್ದಿ ಕೊಡು ಕೊಳ್ಳುಗಳ ಮಾತಿಗೆ ಬಂದು ಸೇರುತ್ತಾರೆ
ಅಹಂ ನ ಗೋರಿ ಕಟ್ಟಿಕೊಂಡ ಮನುಷ್ಯನಿಗೆ
ಸಂಗ ಜೀವನದ ರುಚಿ ಹಚ್ಚಿ ಪ್ರೀತಿ ಹಬ್ಬಿಸುತ್ತಾಳೆ
ಅವಳೊಟ್ಟಿಗೆ ಬಹಳ ಸಂಖ್ಯೆಯ ಅನೇಕ
ಥರದ ಶೇರು ಕಶೇರು ಏನೂ ಅಲ್ಲದವರಿದ್ದಾರೆ ಎಲ್ಲರಿಗೂ ಒಡಲಲ್ಲೊಂದು ಬಸಿರು ನಿರ್ಮಿಸಿಟ್ಟು ಸದಾ ಪ್ರಸವ ಬೇನೆಗೆ ಸಾಕ್ಷಿಯಾಗುತ್ತಾಳೆ
ಪ್ರತಿ ಹೆರಿಗೆಯು ಅವಳಿಗೆ ಚೊಚ್ಚಲು
ಮೌನವಹಿಸುತ್ತಾಳೆ ಮತ್ತೆ ದ್ವನಿ ಅಡಗಿದ ಪಿಸುಮಾತಾಗುತ್ತಾಳೆ
0 ಪ್ರತಿಕ್ರಿಯೆಗಳು