ಸಮ್ಮೇಳನದ ಅಧ್ಯಕ್ಷರಾದ ಪ್ರೊ ಜಿ ವೆಂಕಟ ಸುಬ್ಬಯ್ಯ ಅವರು ಇಂದು ನೇರ ಮೀಡಿಯಾ ಸೆಂಟರ್ ನತ್ತ ಬಂದರು. ಇದೇ ಮೊದಲ ಬಾರಿಗೆ ಆನ್ಲೈನ್ ನಲ್ಲಿ ಸಾಕಷ್ಟು ಮಾಹಿತಿ ತುಂಬಿ ಕೊಡುತ್ತಿರುವ ‘ಅವಧಿ-ನುಡಿನಮನ’ ದತ್ತ ಬಂದು ನಮ್ಮೆಲ್ಲಾ ಕೆಲಸಗಳನ್ನೂ ವೀಕ್ಷಿಸಿದರು.
ಒಂದೇ ಏಟಿಗೆ ಜಗತ್ತಿನ ತುಂಬಾ ಸಮ್ಮೇಳನದ ಸುದ್ದಿ ನೀಡುವ ಪರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಿನೆಮೆಟೋಗ್ರಫಿಯನ್ನು ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿರುವ, ಹಿರಿಯ ವಿಚಾರವಂತ ಎಚ್ ವಿ ವೇಣುಗೋಪಾಲ್ ಅವರ ಮಗ, ಈ ಆನ್ಲೈನ್ ಸಾಹಸದ ಮುಂದಾಳತ್ವ ವಹಿಸಿರುವ ಪೃಥ್ವಿ ಅಧ್ಯಕ್ಷರಿಗೆ ಮಾಹಿತಿ ನೀಡಿದರು.
0 ಪ್ರತಿಕ್ರಿಯೆಗಳು