ಗುಲ್ಬರ್ಗ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಲ್ಪಡುವ ರಾಜ್ಯ ಮಟ್ಟದ ’ಅಮ್ಮ ಪ್ರಶಸ್ತಿ’ಗೆ ಪ್ರಸಕ್ತ ಸಾಲಿಗಾಗಿ ಪ್ರಕಟಿತ ಕೃತಿಗಳನ್ನು ಆಹ್ವಾನಿಸಲಾಗಿದೆ. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ಸ್ಮರಣೆಯಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು . ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ನಿಶ್ಚಿತ ದಿನಾಂಕ ಹಾಗೂ ನಿಶ್ಚಿತ ಸ್ಥಳದಲ್ಲಿಯೇ ಪ್ರಶಸ್ತಿ ಪ್ರದಾನ ಮಾಡುತ್ತಾ ಬರುತ್ತಿರುವ ’ಅಮ್ಮ ಪ್ರಶಸ್ತಿ’ಗೆ ಕಳೆದ ಬಾರಿ ’ದಶಮಾನೋತ್ಸವ ಸಂಭ್ರಮ’ ಆಚರಿಸಿಕೊಂಡಿದೆ.
ಹನ್ನೊಂದನೇ ವರ್ಷದ `ಅಮ್ಮ ಪ್ರಶಸ್ತಿ’ ಗಾಗಿ ನಾಡಿನ ಲೇಖಕರು, ಪ್ರಕಾಶಕರು, 2010-11ನೇ ಸಾಲಿನಲ್ಲಿ ಪ್ರಕಟವಾದ ಸಾಹಿತ್ಯದ ಯಾವುದೇ ಪ್ರಕಾರದ ಕೃತಿಗಳನ್ನು ಕಳುಹಿಸಬಹುದು. ಪ್ರಕಟಿತ ಕೃತಿಗಳ ಎರಡು ಪ್ರತಿಗಳನ್ನು ನವೆಂಬರ್ 5, 2011 ರೊಳಗಾಗಿ ಕಳುಹಿಸಲು ಕೋರಲಾಗಿದೆ.
ಬರುವ ನವೆಂಬರ್ 26ರಂದು ’ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಪುಸ್ತಕ ಕಳುಹಿಸುವ ವಿಳಾಸ : ಮಹಿಪಾಲರೆಡ್ಡಿ ಮುನ್ನೂರ್, ಅಮ್ಮ ನಿಲಯ, # 33 , ರಾಮಚಂದ್ರ ಲೇಔಟ್, ಊಡಗಿ ರಸ್ತೆ, ಸೇಡಂ – 585 222 ಗುಲಬರ್ಗ ಜಿಲ್ಲೆ.
ಹೆಚ್ಚಿನ ಮಾಹಿತಿಗೆ :8861304772 ಮತ್ತು 9449585695 ಸಂಪರ್ಕಿಸಬಹುದು.
0 ಪ್ರತಿಕ್ರಿಯೆಗಳು