ಅಮಿತಾಬ್ ಬಚ್ಚನ್ ವಿವಾದಗಳೇನೆ ಇರಲಿ ಆತ ಮೋಡಿ ಹಾಕಿದ ನಟ. ಆತ ಒಂದು ಜನರೇಶನ್ ನ ಬಿಡಿಸಲಾಗದ ಭಾಗ. ಶೋಲೆ ಸಿನೆಮಾದ ಅದೇ ಬೆಚ್ಚನೆಯ ಆತ್ಮೀಯವಾಗಿಬಿಡುವ ನಟ. ‘ಕನ್ನಡ ಟೈಮ್ಸ್’ ಈತನ ಬದುಕಿನ ಬಗ್ಗೆ ಅಪರೂಪದ ವಿವರಗಳನ್ನು ಹೊಂದಿದ್ದ ಧಾರಾವಾಹಿಯನ್ನು ಪ್ರಕಟಿಸಿತ್ತು. ಆ ಪತ್ರಿಕೆಯ ಯುವ ಬರಹಗಾರ ಎನ್ ಸಿ ಮಹೇಶ್ ಬರೆದ ಈ ಧಾರಾವಾಹಿ ಈಗ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ.
ಬೆಂಗಳೂರು ಪೋಲೀಸರು ಚಿನ್ನಸ್ವಾಮಿ ಸ್ಟೇಡಿಯಂ ನ ಬಾಗಿಲಿಗೆ ಫ್ಯಾಶನ್ ಶೋ ನಡೆಯುವ ಕೆಲವೇ ನಿಮಿಷಗಳ ಮೊದಲು ಬೀಗ ಜಡಿದಿದ್ದು ಹೇಗೆ, ತಾವು ದಿವಾಳಿ ಅಂಚಿಗೆ ತಲುಪಿದ್ದು ಹೇಗೆ, ಮತ್ತೆ ತಲೆ ಎತ್ತಿ ನಿಂತದ್ದು ಹೇಗೆ, ನಾನು ಮಗನಿಗೆ ಹೇಳುತ್ತಿರುವ ಮಾತುಗಳೆನು ಎಂಬಂತಹ ಕುತೂಹಲ ವಿವರಗಳನ್ನು ಈ ಪುಸ್ತಕ ಒಳಗೊಂಡಿದೆ. ಮಹೇಶ್ ಬರವಣಿಗೆ ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ. ಅಮಿತಾಬ್- ಒಂದು ಕಲಾ ಗಾಥೆ ಇನ್ನೇನು ಕೆಲವೇ ದಿನಗಳಲ್ಲಿ ರೂಪಾ ಪ್ರಕಾಶನದ ಮೂಲಕ ಪುಸ್ತಕ ಮಳಿಗೆಗಳಲ್ಲಿರುತ್ತದೆ.
0 ಪ್ರತಿಕ್ರಿಯೆಗಳು