ಅಭಿಜ್ಞಾ ಪಿ ಎಮ್ ಗೌಡ ಕವಿತೆ- ಯಾರೂ ಇಲ್ಲ…

ಅಭಿಜ್ಞಾ ಪಿ ಎಮ್ ಗೌಡ

ಎದೆಯ ಬೀದಿಗಳು ಪಾಳು ಬಿದ್ದಂತಿದ್ದರು
ನೋಡುವವರು ಯಾರೂ ಇಲ್ಲ
ನದಿಯಂತೆ ಹರಿದ ಕಣ್ಣೀರ ಧಾರೆಯನು
ಒರೆಸುವವರು ಯಾರೂ ಇಲ್ಲ

ಮೊಗದೊಳಗಿನ ನಗು ಮಾರಾಟಕಿದೆಯೆ
ಆಂತರ್ಯದ ನೋವ ಛಾಯೆಯಲಿ
ಜಗದ ಕಷ್ಟಗಳ ಹೊತ್ತು ತಿರುಗಿದ ಮನವ
ಸಂತೈಸುವವರು ಯಾರೂ ಇಲ್ಲ

ಬಳಲಿ ಬೆಂಡಾದ ಜೀವದಲಿ ಉತ್ಸಾಹದ
ಚಿಲುಮೆ ಚಿಗುರುತಿದೆ
ಅಳಲು ತೋರದೆ ಬಚ್ಚಿಟ್ಟಿದ ಕನಸುಗಳ
ಕರೆಯುವವರು ಯಾರೂ ಇಲ್ಲ

ಅಭಿಪ್ಸೆಗಳ ಹೊಳಪು ಕುಂದಿ ತಮದ
ಕಣಜವೆ ತುಂಬಿ ಹೋಗಿದೆ
ಸುಭಿಕ್ಷೆ ಬಯಸಿದ ಹೃದಯದ ಕೋರಿಕೆಯ
ಪೂರೈಸುವವರು ಯಾರೂ ಇಲ್ಲ

ಅಂತರಂಗದ ಆಸೆ ಆಕಾಂಕ್ಷೆಗಳೆಲ್ಲ ಸುಟ್ಟು
ಬೂದಿಯಾಗುತಿವೆ ಅಭಿ
ಚಿಂತಿಸಿ ಮಂಥಿಸಿದ ವಿಷಯದ ಸ್ವಾರಸ್ಯವ
ಬರೆಯುವವರು ಯಾರೂ ಇಲ್ಲ

‍ಲೇಖಕರು Admin

November 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: