ಬಿದಲೋಟಿ ರಂಗನಾಥ್
ಅದು,
ಮಣ್ಣಿನ ಗೋಡೆ
ಸುಣ್ಣ ಬಳಿಯಲು
ಅಪ್ಪನ ಕಿಸೆಯಲ್ಲಿ
ನಯಾ ಪೈಸವಿರಲಿಲ್ಲ
ಮಕ್ಕಳು ಅಳುತಾವೆ
ಸರೀಕರ ಹೊಸ ಬಟ್ಟೆ ನೋಡಿ
ಕೂಲಿಗೆ ಕರಿಯೋರಿಲ್ಲ
ಬಿರು ಬೇಸಿಗೆ
ಹಳೆ ಬಟ್ಟೆ ಹೊಗೆಯಲು
ಅಮ್ಮಗೆ ಹುಷಾರಿಲ್ಲ.
ಹೊಟ್ಟೆಗೆ ಕೂಳಿಲ್ಲ.
ಬೇವಿನ ಮರದ ತಲೆಯ ತುಂಬಾ ಹೂವು
ಹೊಂಗೆಯ ತಂಪು ನೆರಳು
ಮಾವಿನ ಕಾಯಿಯ ಇಣುಕು
ಮನೆಯಲ್ಲಿ ಬಿರು ಬೇಸಿಗೆ
ಅನ್ನವಿಲ್ಲದ ನನಗೆ
ಹೋಳಿಗೆಯ ಕನಸು
ಐದು ಹತ್ತು ಪೈಸೆಯ ಕುಟ್ಟಾಟ ಮತ್ತು
ಎಂಟಾಣಿ ರೂಪಾಯಿ ಎತ್ತಾಟದ ಕನಸು
ದೊಡ್ಡವರ ಹೆಡ್ಡಾಟ ನೋಡುವ ಬಯಕೆ.
ನನ್ನಲ್ಲಿ ಕಾಸಿಲ್ಲ
ಆಟವ ನೋಡುತ
ಮಿಣ ಮಿಣ ಬಿಡುವ ದುಃಖದ ಕಣ್ಣುಗಳು
ಮುಂದೆ ನಿಂತಿವೆ
ದನಗಳಿಗೆ ಹುಲ್ಲಾಕಿಲ್ಲ ಎಂತೋದನೋ
ಎನ್ನವ ಅಪ್ಪನ ಭಯ.
ತಲೆ ಮೇಲೆ ಕೈ ಹೊತ್ತು
ಕೂತ ಅಪ್ಪಂಗೆ ಕೊಟ್ಟೆ ಐಡಿಯ
‘ನಡಿ ಹೋಗೋಣ’
ಅಕ್ಕಲ ಹೊಂಗೆ ಕಾಯಿ ಹಾಯಲು
ಕುಟ್ಟಿ ಬೀಜ ತಗೆದು ಮಾರಿ ಉಗಾದಿ
ಮಾಡೋಣ ಸರೀಕರಂತೆ.
ಇನ್ನು ಐದು ದಿನ ಐತೆ ಉಗಾದಿ.!
ಅಪ್ಪನ ಕಣ್ಣಲ್ಲಿ ಉಗಾದಿಯ ಕನಸು.
ನನಗೊ ಹೊಸ ಬಟ್ಟೆ ತೊಡುವ ತವಕ
ಹೊರಟೆವು ಲಘು ಬಗೆ .
ಬಯಲು ಬಯಲೆಲ್ಲಾ ತಿರುಗಿ
ಹೊಂಗೆಮರದ ನೆಲ ತಡಕಿ
ಕಾಯಿ ಕಾಯಿ ಕೂಡಾಕಿ ಕುಟ್ಟಿ ಮಾರಿ
ಮಾಡಿದೆವು ಉಗಾದಿ
ಬೆಲ್ಲ ಹುರುಳಿ ಮಿಶ್ರಿತ ಹೋಳಿಗೆ.!
ಪಕ್ಕದ ಮನೆಯಲಿ ತೊಗರಿ ಬೇಳೆಯ ಹೋಳಿಗೆ.
ಬೆಳ್ಳಗಿದೆ ಕೊಡು ಎಂದೆ
ಕೊಡಲ್ಲ ಎಂದು ತಲೆಯಾಡಿಸಿದ.
ಅಲ್ಲೇ ಹುಟ್ಟಿತೆ? ಬಡವ ಬಲ್ಲಿದ ಎನ್ನುವ ಭೇದ.!
ಅಂತೂ ಆಯಿತು ಉಗಾದಿ
ಸಂತೆ ಬಟ್ಟೆ ನಮಗೆ ತೊಡಿಸಿ.
ಕಾಸು ಕುಟ್ಟುವ ಕನಸು
ಸರೀಕರ ಆಟದ ಜೊತೆ ಮಣ್ಣಾಯಿತು.! ಬಡವರ ಚೌಕಾಬಾರ ಕಳೆ ನೀಡಿತು.
ನೆನ್ನೆಯಿಂದ ನನ್ನ ಕಾಡುತ್ತಿದ್ದ, ನನ್ನ ಬಾಲ್ಯದಲ್ಲಿ ನಾ ಉಂಡ ಉಗಾದಿ ಯ ನೆನಪು ಯಥಾವತ್ತಾಗಿ ರಂಗನಾಥ್ ರ ಅಕ್ಷರಗಳಲ್ಲಿ ಇಂದು .!!ಖುಷಿಯಾಯ್ತು ಸರ್.ಧನ್ಯವಾದಗಳು.
ಧನ್ಯವಾದಗಳು ಸಿ ಎಸ್
Tumba chennagide…
ರಂಗನಾಥ ಸರ್ ಬಡವರ ಪಾಲಿಗೆ ಯುಗಾದಿ ಬರಲಾರದು. ಹಣವಂತರ ಮೆರೆದಾಟ.
ನಿಮ್ಮ ಕವಿತೆ ನನ್ನ ಬದುಕಿನ ಹಲವು ಹಲವು ನೆನಪುಗಳನ್ನು ತಂದಿತು.ಅಳು ಬಂತು ಅತ್ತೆ. ಈ ಬಾರಿ ಹಬ್ಬ ಮಾಡಲಿಲ್ಲ. ಕವಿತೆ ಕಾಡಿತು ರಂಗಣ್ಣ
ಧನ್ಯವಾದಗಳು ನಾರಾಯಣಪ್ಪ ಸರ್ ಮತ್ತು ಅಕ್ಕ ಮಹಾದೇವಿ ಮೆಡಮ್
ee kaviteyallina bevu, bellavannu maresuvantide…van go na chitragalhu novinalli addhida kuncha vaadarae …ranganath padyagalhu sankatadalli saridaadida aksharagalhu…padya ulhisi biduva vishaada bega karagadhu..