ಅಕ್ಷರದ ತಾಯಿ ಸಾವಿತ್ರಿ ಬಾಯಿ ಫುಲೆ…

ಮಹಾಂತೇಶ ನವಲಕಲ್


ನೀನು ಸರಿದ ಅಕ್ಷರಗಳೆಲ್ಲ ಮಂತ್ರಬೀಜಗಳಾಗಿ; ಅಂಬೇವಾಡಿಯ ಫಲವತ್ತಾದ ಭೂಮಿಯಲಿ ಭೀಮಬಾಬನ‌ ಬರುವಿಕೆಗೆ ಸುಪ್ರಭಾತವಾಡಿದವು


ಕತ್ತಲು ತುಂಬಿದ ಆ ಓಣಿಗಳಲಿ
ನಿನ್ನ ದಾರಿಯೇ ನಿನಗೆ ಕಾಣದಾದಾಗ
ಆ ಬದುಕಿದ್ದ ಸತ್ತ ಮನುಷ್ಯರ ತಿಥಿಗೆ ಅಜ್ಞಾನದ ಕಟ್ಟಿಗೆಗಳು ಉರಿದುರಿದು ದಹ ದಹಿಸಿ ಉರಿದು ದಾರಿ ದೀಪಗಳಾದವು


ನೀ ಕಲಿಸ ಹೊರಟ
ಆ ದಾರಿಗೆ ಬಿದ್ದ ಗಾಜಿನ ಚೂರುಗಳೆಲ್ಲ ತುಳಿದಷ್ಟು ರಕ್ತ ಸಿಕ್ತ ಹನಿಗಳಾಗಲಿಲ್ಲ ಕ್ರಾಂತಿಯ ಮೊಳಕೆಗಳಾದವು


ಆ ಓಣಿಯ ನಿನ್ನ ಪ್ರವೇಶಕೆ ಅಂಜಿ ಕಟ್ಟಿದ
ಸಾವಿರಾರು ವರ್ಷಗಳ ಸರಪಳಿಗಳು ಇನ್ನೂ ಅವರನು ಬಿಗಿದಪ್ಪಿದವು


ಕಲಿಸಿದ ಪಾಠಗಳ ಓನಾಮಕೆ
ಮತ್ತೆ ಅದೆ ಸಾವಿರಾರು ವರ್ಷಗಳ ಸರಪಳಿ ಠಳ್ ಠಳ್ ಎಂದು ಬಿರುಕುಗೊಂಡವು


ಆ ಓಣಿಗೆ ಹೋಗಬೇಡವೆಂದು ಎಸೆದ ಬಹುಮಾನಗಳ ಕಲ್ಲುಗಳೆಲ್ಲ
ಒಂದೊಂದು ಮೆಟ್ಟಲುಗಳಾಗಿ
ನಿನ್ನಂತಹ ಅಕ್ಷರದ ಅವ್ವಂದಿರನು ನಿರ್ಮಿಸಿದವು


ಜ್ಯೋತಿಬಾನ ಜ್ಯೋತಿಯೇ
ಕತ್ತಲು ಓಣಿಯ ಮಿಂಚು ಹುಳವೇ
ನೀ ಹುಟ್ಟಿದ ದಿನವೆ ಅಗ್ರಹಾರಕೆ ಮೆಟ್ಟು ಬಿದ್ದಿತ್ತು
ಅಂದೇ ವಿದ್ಯಾ ಸರಸ್ವತಿ ಸಾವನ್ನಪ್ಪಿದಳು

‍ಲೇಖಕರು Admin

January 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: