ಅಕ್ಷಯ ಕಾಂತಬೈಲು
ಕೋಳಿ ಪುಕ್ಕವ ಪೂಜೆ ಮಾಡಿರೆ
ನವಿಲಗರಿ ಆದೀತೇನೋ
ಸಿಕ್ಯಾಳಂತ ಕುಣಿತ ಹಾಕಿರೆ
ಯೋನಿ ಒಳಗಿನ ಮರ ಬೀಜ ಬಿಟ್ಟಿತೇನೋ
ಸ್ಯಾವಂತಿಗೆ ಹಾರ ತಂದು ಕೋತಿಗೆ ತೊಡಿಸಿರೆ
ಬೂದಿ ಬಡಕ ಪರಸಿವನ ಡಮರ ಸದ್ದಾದೀತೆನೋ
ಬ್ರಹ್ಮಾಂಡದಲಿ ನನ್ನ ಪಿಂಡಾಂಡ
ತೆರೆದ ತತ್ವದ ಜಗಜ್ಯೋತಿ ಕಾಣೋ
ಆದರೂ
ಆರು ಕಾಂಡದ ನೀರಾ ಕೆಳಗೆ ಉಳಿದಾವ
ಆದರೂ
ಬಿಡದೆ ಗುರಿ ಹಚ್ಚಿ ಗುಂಡು ಹಾಕಬೇಕೋ
ಈಗ ಕಾಣೋ ತತ್ತಿ ಒಳಗಿಂದು ಬೀಜ ಹುಟ್ಟಿತೋ
0 ಪ್ರತಿಕ್ರಿಯೆಗಳು