ಅಕ್ಷತಾ ಕೃಷ್ಣಮೂರ್ತಿ ಹೊಸ ಕವಿತೆ – ಎಲೆ ಮತ್ತು ಚಳಿ…

ಅಕ್ಷತಾ ಕೃಷ್ಣಮೂರ್ತಿ

ನೀನು ಈ ಹೊತ್ತಲ್ಲಿ ಅದೇ ಕಡಲ
ದಂಡೆಯ ಬಳಿ ಕುಳಿತು
ಕಾಯುತ್ತಿರುವೆ
ಕಡಲ ಹಕ್ಕಿ
ಗೂಡ ಸೇರುವುದನು
ಅಥವಾ
ಗೂಡ ಬಿಡುವುದನು

ನಾನಿಲ್ಲಿ ಕಾಡಲ್ಲಿ
ಮರಗಳ ನಡುವೆ
ನಿನ್ನ ಹೆಸರಿನ ಮೊದಲಕ್ಷರ
ಹೊತ್ತ ಎಲೆಗಳನ್ನೆ
ಒಟ್ಟುಗೂಡಿಸುತಿರುವೆ
ಯಾರಿಗೂ ಚೂರು
ಖಬರು ಕೊಡದೆ
ನಿನ್ನಿರುವಿನ ಸುಖ
ಕಾಣುತಿರುವೆ

ಕಾಡ ಹಣ್ಣುಗಳ ಚೀಪಿ
ಶಬರಿಯಂತೆ ಕೊಟ್ಟಾಗ
ಮರು ಮಾತಾಡದೆ
ಸೀಬಿದ್ದವನು
ಇಂದು
ಬಿಸಿಲುಕೋಲು ಹಿಡಿದು
ಗರಮಿ ಕಾ ಮಾಹೋಲ್ ಎನ್ನುತ್ತ
ಪಿಟೀಲು ಕುಯ್ಯುತ್ತಿರುವೆ

ಇಲ್ಲಿ ನಾನು
ಸುಮ್ಮಸುಮ್ಮನೆ
ಬಂದಪ್ಪುವ ಚಳಿಯ
ಸಹಿಸಿ
ಕೌದಿ ಹೊದ್ದರೂ
ನೇಯ್ಗೆ ಪರಿಶೀಲಕನಂತೆ
ನೆಪಹೂಡಿ
ಎಲೆಮಳೆಗರೆವ ಕಿತಾಪತಿಗೆ
ಅಗ್ಗಿಷ್ಠಿಕೆ ಮುಂದೆ ಕುಳಿತಿದ್ದೇನೆ
ಸುಡುವ ಬೆಂಕಿ
ನಿನ್ನ ಹೆಸರಿನಲಿ ಉರಿಸಿ

ಅಷ್ಟಕ್ಕೂ ಸಿಟ್ಟಿದೆ
ಎಲೆಗಳ ಬಗೆಗೆ
ಚಿಗುರುವುದು
ಅರಳಿಸುವುದು
ಹೂ ಕಾಯಿ
ಕೆಣಕಿ
ಕಣ್ಣು ಮಿಟುಕಿಸಿ
ಇನ್ನೇನು ಮುಟ್ಟಬೇಕು
ಅಷ್ಟರಲ್ಲಿ ಮಾಯಾ
ಗಾಳಿಯ ಜೊತೆ
ಇನ್ನೆಲ್ಲೋ ಹಾರಿ

ಅದಕೆ ಎಲೆಯ
ತೇಲುವ ಹಂಬಲಕೆ
ಪೂರ್ಣವಿರಾಮವಿಡಲು
ಚಳಿಯ ನಿಘಂಟು
ಓದಲೇಬೇಕಾಗಿದೆ
ಇಳಿಗಾಲದಲ್ಲೂ…

‍ಲೇಖಕರು Admin

January 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: