ಅಕ್ಷತಾ ಕೃಷ್ಣಮೂರ್ತಿ- ಗಜಲ್…

ಅಕ್ಷತಾ ಕೃಷ್ಣಮೂರ್ತಿ

ನೀನು ಮೆಲ್ಲನೆ ಬೆಣ್ಣೆ ಕದಿಯಲು ಬಂದ ಗೋಪಿಕಂದನೆಂದಾಗಲೇ ನಾ ನಕ್ಕಿದ್ದು
ನೀನು ರಾಧೆಯ ಹೆರಳಿನ ಪಾರಿಜಾತದ ಪಕಳೆಯೆಂದಾಗಲೇ ನಾ ನಕ್ಕಿದ್ದು

ನನ್ನ ನಯವಾದ ನಜರಿಗೆ ಕಾಣುವುದು ಬರಿ ನಿನ್ನೊಲವು ನಸುಕು
ಬರ್ ಪೂರ್ ಬಾಚಿಕೊ ನೀನು ನುಡಿದಾಗಲೇ ನಾ ನಕ್ಕಿದ್ದು

ಒಂದು ಮಾತು ಎಂದವನೆ ಬಿಡದೆ ಸಾವಿರ ಸಾವಿರ ಒಲವಿನದೆ ಮಾತಾಡುವೆ
ಪ್ರತಿ ಅಕ್ಷರವೂ ಎನ್ನ ಒಳಗೆ ನಾಚುವ ನಿನ್ನ ಕಂಡಾಗಲೇ ನಾ ನಕ್ಕಿದ್ದು

ಕೆಂಪನೆಯ ತುಟಿಯಲ್ಲಿ ನನಗೆಂದೆ ಕೊಡಲು ಕಾದಿದೆ ಮುತ್ತು
ಬೇಗನೆ ಕೊಡು ಎಂದು ಗಡಬಡಿಸಿದಾಗಲೇ ನಾ ನಕ್ಕಿದ್ದು

ಎದೆಯ ಬಾಗಿಲು ತೆರೆದಿದೆ ಬಾ ಎಂದು ಸಾರಿ ಸಾರಿ ಕೂಗುತ್ತದೆ ನನ್ನೆದೆ
ಅಂದಾಡಿದ ನಿನ್ನ ಸುಪ್ರಭಾತವ ಕೇಳಿ ಎದ್ದಾಗಲೇ ನಾ ನಕ್ಕಿದ್ದು

ಮಳೆಹನಿಗಳು ನಿನ್ನೊಲುಮೆಯ ಮಾತು ಕೇಳಿ ಸೋತು ಮರುಳು ನನ್ನೊಳಗೆ
ಅಲ್ಲೆ ದಂಗಾಗಿ ಇಳೆಯಲ್ಲಿ ನಿಂತುಬಿಟ್ಟಾಗಲೇ ನಾ ನಕ್ಕಿದ್ದು

ಬದುಕು ಚಿಕ್ಕದು ಬಯಸಿ ಬರುವೆ ಎಂದ್ಹೇಳಿಬಿಡು ಕೇಳಿ ಖುಷಿಯಲಿ ಮೈಮರೆವೆನು
ನಿನ್ನ ಉಸಿರಲ್ಲಿ ಮಿಂದೆಂದು ಅಕ್ಷತ ನಿರ್ಮಲವಾದಾಗಲೇ ನಾ ನಕ್ಕಿದ್ದು

‍ಲೇಖಕರು Admin

October 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: