ಅಕ್ಷತಾ ಕೃಷ್ಣಮೂರ್ತಿ ಕವಿತೆ ಈ ಹೊತ್ತಿನಲ್ಲಿ…

ಅಕ್ಷತಾ ಕೃಷ್ಣಮೂರ್ತಿ

ಚಳಿ ನಿಧಾನ
ಮೆಟ್ಟಿಲಿಳಿಯುತಿದೆ
ಒಂದೊಂದೆ ಚಿಗುರುಗಳ
ದಾಟಿ
ಒಲವು
ಹುಟ್ಟುತಿದೆ
ಒಂದೊಂದೆ
ಭಾವಗಳ ಮೀಟಿ

ಸದ್ದಿಲ್ಲದೆ ಬಂದೆ
ಎಲ್ಲ ಶಬುದಗಳಿಗೆ ಅರ್ಥವಾದೆ
ಪ್ರೀತಿಸುವುದು ಧರ್ಮ ಎಂದೆ
ಆವರಿಸಿದ್ದು
ಹಚ್ಚ ಹಸಿರಿನ ನೆರಳು ಮಾತ್ರ

ಒಲವಿನ ಜೊತೆ
ಅಂಟಿಯೆ ಹುಟ್ಟಿದವು
ಈ ಜಗದಲಿ
ಬಿಸಿಲಿನ ಅಂಚು ಆರಿದ
ದೀಪ
ಉರಿದ ಕಣ್ಣೀರು
ತರಗೆಲೆಗಳ ಕಾಡು

ನೋವಿಡುವ ನಕ್ಷತ್ರಗಳು
ಪ್ರತಿ ಇರುಳಲ್ಲೆ ಹುಟ್ಟಿ
ಬೆಳಗಲ್ಲಿ ಅಡಗುತ್ತದೆ
ಕತ್ತಲೆಯ ಒಡೆಯಲು
ಹುಟ್ಟಲಿಲ್ಲ ಒಂದೂ
ಉಲ್ಕೆ
ಮತ್ತೆ ಮತ್ತೆ ಇರುಳ
ಅಂಗಳದಲ್ಲಿ ಬೀಳುತ್ತದೆ
ಹಠಾತ್ತನೆ ಮನೆ
ಎದುರಿಗಿದ್ದ ಮರದ
ತೆಂಗಿನಕಾಯಿ.

ಋತುಗಳ ಕಾಲ
ಬದಲಾಗುತಿದೆ
ಬಯಕೆಯ ಹಾದಿಯಲಿ
ಹಾದ ನೋವಿನ ದೂರ
ಪ್ರತಿ ಸಂಜೆ ನೆರಳು
ಗಳ ಜೊತೆ ಮುಳುಗಿ ಬಿಡುವ
ಸೂರ್ಯ
ವಿರಹದ ಹೊಸ ಸಾಲಿಗೆ
ಸಾಕ್ಷಿಯಾಗುತಿದೆ

ಚಳಿ ನಿಧಾನ
ಮೆಟ್ಟಿಲಿಳಿಯುತಿದೆ
ಎದ್ದ ಗಾಳಿ
ಬಯಕೆ ಬೇಡಿಕೆಯ
ಮಾತೇ ಆಡುತಿದೆ

‍ಲೇಖಕರು avadhi

March 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: