ಅಂದಿನ ಇರುಳು ಇವನ ಕಂಗಳಲ್ಲಿ ಸಜ್ಜಾಗುವ ಹುನ್ನಾರದಲ್ಲಿತ್ತು

ಒಂದು ಬಸ್ಸ್ಟಾಪು

ವಿಜಯ್ ಹೂಗಾರ್

ಆತ ಬಸ್ಸ್ಟಾಪಿಗೆ ಬಂದು ನಿಂತಾಗ
ನಿನ್ನೆ ರಾತ್ರಿಯ ಬಲವಂತ ಮೈಥುನದ ಉರಿ ಇನ್ನು ಆರಿರಲಿಲ್ಲ.
ಲೋಕ,
ಅದೇನೋ ಕಳೆದುಕೊಂಡಂತೆ ಓಡತೊಡಗಿತ್ತು.
ಬಸ್ಸು, ಬೈಕು, ಆಟೋ, ಟೆಂಪೋ ಹೀಗೆ ಸಾಲು ಸಾಲಾಗಿ.
ಜೊತೆಯಲ್ಲಿ ನಿಂತ ಸಹಪ್ರಯಾಣಿಕರು ನೇತಾಡಿ,ನುಸುಳಿ,ತೆವಳಿ
ಮಸೆದು ತಿನ್ನುವ
ದಟ್ಟಣೆಯಲ್ಲಿ ಹತ್ತಿ ಹಠ ಸಾಧಿಸುತ್ತಿದ್ದರು.

ಆಗಷ್ಟೇ ಖಾಸಗಿ ಬ್ಯಾಂಕಿನಿಂದ ಹೊರಬಂದ ಅವನಿಗೆ
ಅಲ್ಲಿ ನಡೆದ ಘಟನೆಯಿಂದ ಹೊರ ಬರಲು ಆಗಲಿಲ್ಲ.
ಆ ಸುಂದರಿ,
ಬಣ್ಣ ಬಣ್ಣದ ಮಾತಿನಿಂದ ಸೆರೆಹಿಡಿದು
ಕೊನೆಗೂ ಒಂದೆರೆಡು ಇನ್ಸುರೆನ್ಸಗೆ ಸಹಿ ಹಾಕಿಸಿಕೊಂಡಿದ್ದಳು.
ಅದೆಷ್ಟೇ ನಕಾರ ಎತ್ತಿದರು ಕೊನೆ ಅಸ್ತ್ರ ಎಂಬಂತೆ
ತುಸುಬಾಗಿ ಬ್ರಹ್ಮಾಂಡದ ಎರಡು ತೂಗು ತುಂಡುಗಳ
ದರ್ಶನ ಕ್ಷಣಾರ್ದದಲ್ಲೇ ತೋರಿಸಿ ಗೆದ್ದಿದ್ದಳು.
ಹೊರ ಬಂದು ರಸ್ತೆಗೆ ನಿಂತಾಗ ಧಗೆಗೆ ಇನ್ನಷ್ಟು
ಮೈ ಬೆವರತೊಡಗಿತ್ತು.
 
ಆ ಸುಂದರಿ ಸೃಷ್ಟಿಸಿದ ದೃಶ್ಯ ಕಣ್ಮುಂದೆ ಹೊತ್ತಿ ಉರಿಯುತ್ತಿತ್ತು.
ಸಮಯ ಸಾಧಿಸಿ ಬಂದ ಭಿಕ್ಷುಕ, ಕೈಚಾಚಿದ.
ಧಗೆಗೆಂದು ಜೇಬಿನಲ್ಲಿ ಕೈ ಹಾಕಿದಾಗ
ಭಿಕ್ಷುಕನ ಕಂಗಳಲ್ಲಿ ಸೂರ್ಯನನ್ನೇ ಮೀರಿಸುವಷ್ಟು ಪ್ರಭೆ ಇತ್ತು.
ಜೇಬಿನಿಂದ ಬಂದ ಕರ್ಚಿಫು ನೋಡಿ
ಕಂಗಳಿಗೆ ಇರುಳು ಬಡಿದು ಹೋಗಿತ್ತು.
ಅಂದಿನ ಇರುಳು ಇವನ ಕಂಗಳಲ್ಲಿ ಸಜ್ಜಾಗುವ ಹುನ್ನಾರದಲ್ಲಿತ್ತು.
 

‍ಲೇಖಕರು G

June 15, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: