ಅಂಗಳದಲ್ಲೊಂದು ಸಂಜೆಮೊಲ್ಲೆ ಸಸಿಯನ್ನಾದರೂ..

ಗುರುತಿಗೆ ಗುರುತಿಲ್ಲ

kavyashree

ಕಾವ್ಯಶ್ರೀ ಎಚ್

ಅದೇ ಆ ತಿರುವಿನಂಚಲಿ
ನೆಡಬೇಕಿತ್ತು ಕಲ್ಲೊಂದನು
ನೀ ಎದುರಾದ ಘಳಿಗೆಗೆ ,

ನೀ ಕಾಲಿಟ್ಟ ನೆಪಕ್ಕೆ
ನೆಡಬೇಕಿತ್ತು
ಅಂಗಳದಲ್ಲೊಂದು ಸಂಜೆಮೊಲ್ಲೆ ಸಸಿಯನ್ನಾದರೂ

women and the boat

ವಿನಿಮಯವಾಗಲಿಲ್ಲ ಯಾವುದೇ ಕಾಗದ ಪತ್ರ
ಕಡೆಗೊಂದು ಗುಲಾಬಿ ಪಕಳೆಯೂ
ಖಾಲಿ ಹಾಳೆಗಳ ನಡುವೆ ಇಣುಕುವುದಿಲ್ಲ
ನವಿಲು ಗರಿ

ಯಾವ ಮಳೆಯೂ ತೋಯಿಸಲಿಲ್ಲ
ಅದಕೇ ಈ ಹನಿಗಳಿಗೂ ನೆನಪಿಲ್ಲ
ಮರೆಯಾಯಿತು ಮೂಡಿದಾಗಲೇ
ಕಡಲ ದಡದ ಹೆಜ್ಜೆ ಗುರುತು

lines

 

 

ಏಕೋ ಎಂತೋ
ಇಂದು ಸುರಿದ ಮಳೆಗೆ ಮಣ್ಣವಾಸನೆಯಿಲ್ಲ
ಮನದ ಯಾವ ಮೂಲೆಯೂ ತೋಯಲಿಲ್ಲ
ಸುಳಿಗಾಳಿ ಬಲು ಹಗುರ ನೆನಪಭಾರವಿಲ್ಲ
ಕಳೆದ ನಿನ್ನೆಗಳ ಕೊರೆತವಿಲ್ಲ
ನಿರ್ಭಾವುಕ ಖಾಲಿ ಸಂಜೆ
ಕಳೆದೇಹೋಯಿತು ನಿರ್ದಯಿ ಬದುಕು

lines

 

 

ರುದ್ರವೀಣೆಗಷ್ಟೇ ಮೀಟುವುದಿಲ್ಲ
ಆಳ ನಾಟಿದ ಮುಳ್ಳಿಗೂ ಮುಲುಗುತ್ತದೆ
ಈ ಪುಟ್ಟ ಹೃದಯ
ಗುರಾಣಿ ಹಿಡಿದು ನಿಂತರೆ
ಯಾವ ರಾಗಕೂ ತಾವಿಲ್ಲ

‍ಲೇಖಕರು admin

October 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. ravi

    ಮನದ ಯಾವ ಮೂಲೆಯೂ ತೋಯಲಿಲ್ಲ……
    ಒಳ್ಳೆ ಕವನ….. ನಿಮ್ಮ ಒಳ್ಳೆ ಫೋಟೋ ಜತೆ…….

    ಪ್ರತಿಕ್ರಿಯೆ
    • ಕಾವ್ಯಶ್ರೀ ಎಚ್

      ಥ್ಯಾಂಕ್ಯೂ ರವೀಂದ್ರ ಸರ್, ನೀವು ಬರೆಯುವ ಚಿತ್ರಗಳು ಇನ್ನೂ ಚಂದ

      ಪ್ರತಿಕ್ರಿಯೆ
  2. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ , ಪದ್ಯ.

    ಪ್ರತಿಕ್ರಿಯೆ
    • ಕಾವ್ಯಶ್ರೀ ಎಚ್

      ಧನ್ಯವಾದಗಳು ನೂರುಲ್ಲಾ ಸರ್

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: