ಗುರುತಿಗೆ ಗುರುತಿಲ್ಲ
ಕಾವ್ಯಶ್ರೀ ಎಚ್
ಅದೇ ಆ ತಿರುವಿನಂಚಲಿ
ನೆಡಬೇಕಿತ್ತು ಕಲ್ಲೊಂದನು
ನೀ ಎದುರಾದ ಘಳಿಗೆಗೆ ,
ನೀ ಕಾಲಿಟ್ಟ ನೆಪಕ್ಕೆ
ನೆಡಬೇಕಿತ್ತು
ಅಂಗಳದಲ್ಲೊಂದು ಸಂಜೆಮೊಲ್ಲೆ ಸಸಿಯನ್ನಾದರೂ
ವಿನಿಮಯವಾಗಲಿಲ್ಲ ಯಾವುದೇ ಕಾಗದ ಪತ್ರ
ಕಡೆಗೊಂದು ಗುಲಾಬಿ ಪಕಳೆಯೂ
ಖಾಲಿ ಹಾಳೆಗಳ ನಡುವೆ ಇಣುಕುವುದಿಲ್ಲ
ನವಿಲು ಗರಿ
ಯಾವ ಮಳೆಯೂ ತೋಯಿಸಲಿಲ್ಲ
ಅದಕೇ ಈ ಹನಿಗಳಿಗೂ ನೆನಪಿಲ್ಲ
ಮರೆಯಾಯಿತು ಮೂಡಿದಾಗಲೇ
ಕಡಲ ದಡದ ಹೆಜ್ಜೆ ಗುರುತು
ಏಕೋ ಎಂತೋ
ಇಂದು ಸುರಿದ ಮಳೆಗೆ ಮಣ್ಣವಾಸನೆಯಿಲ್ಲ
ಮನದ ಯಾವ ಮೂಲೆಯೂ ತೋಯಲಿಲ್ಲ
ಸುಳಿಗಾಳಿ ಬಲು ಹಗುರ ನೆನಪಭಾರವಿಲ್ಲ
ಕಳೆದ ನಿನ್ನೆಗಳ ಕೊರೆತವಿಲ್ಲ
ನಿರ್ಭಾವುಕ ಖಾಲಿ ಸಂಜೆ
ಕಳೆದೇಹೋಯಿತು ನಿರ್ದಯಿ ಬದುಕು
ರುದ್ರವೀಣೆಗಷ್ಟೇ ಮೀಟುವುದಿಲ್ಲ
ಆಳ ನಾಟಿದ ಮುಳ್ಳಿಗೂ ಮುಲುಗುತ್ತದೆ
ಈ ಪುಟ್ಟ ಹೃದಯ
ಗುರಾಣಿ ಹಿಡಿದು ನಿಂತರೆ
ಯಾವ ರಾಗಕೂ ತಾವಿಲ್ಲ
Its good
Thank you so much Narasimha murthy sir.
ಮನದ ಯಾವ ಮೂಲೆಯೂ ತೋಯಲಿಲ್ಲ……
ಒಳ್ಳೆ ಕವನ….. ನಿಮ್ಮ ಒಳ್ಳೆ ಫೋಟೋ ಜತೆ…….
ಥ್ಯಾಂಕ್ಯೂ ರವೀಂದ್ರ ಸರ್, ನೀವು ಬರೆಯುವ ಚಿತ್ರಗಳು ಇನ್ನೂ ಚಂದ
ಚೆನ್ನಾಗಿದೆ , ಪದ್ಯ.
ಧನ್ಯವಾದಗಳು ಸರ್
ಕವನ ಚೆಂದವಾಗಿದೆ ಕಾವ್ಯಜೀ
ಧನ್ಯವಾದಗಳು ಸರ್
ಧನ್ಯವಾದಗಳು ನೂರುಲ್ಲಾ ಸರ್