ರೈಲು ಸೊಲ್ಲಾಪುರ ದಾಟಿ ದಢ್ ದಢಿಲ್ ಸದ್ದು ಮಾಡುತ್ತ ಬಿಜಾಪುರದ ಕಡೆ ಓಡುತ್ತಿತ್ತು. ನಾನು ಕಿಟಕಿಯಾಚೆ ಕಣ್ಣು ನೆಟ್ಟು ಕೂತಿದ್ದೆ. ಎಲ್ಲಿ ನೋಡಿದರೂ ಬಯಲು. ಒಂದಿಷ್ಟು ಮಳೆ ಬಿದ್ದಿತ್ತು. ಎಂಬುವುದಕ್ಕೆ ಕುರುಹೆಂಬತೆ ಹಸಿರು ಕಾಣಿಸುತ್ತಿತ್ತು . ಒಂದೇ ಸಮ ಓಡಿದರೂ ಸುಸ್ತಾಗದ ‘ಬಸವ ಎಕ್ಸ್ ಪ್ರೆಸ್’ ಬಿಜಾಪುರ ಮುಟ್ಟಿಬಿಡುವ ಅವಸರದಲ್ಲಿ ಓಡುತ್ತಾ ಓಡುತ್ತಾ ಒಂದು ಸೇತುವೆಗೆ ನುಗ್ಗಿತು.
ಸೇತುವೆಯ ಎರಡೂ ಕಡೆ ಕಣ್ಣು ಹಾಯಿಸಿದಷ್ಟೂ ನೀರು. ಆ ನೀರಿನ ಮಧ್ಯೆ ಮುಳಗಲೋ ಬೇಡವೋ ಎಂದು ಲೆಕ್ಕಾಚಾರ ಹಾಕುತ್ತಾ ಉಳಿದ ಒಂದು ಪುಟ್ಟ ದೇಗುಲ. ಕಣ್ಣಿಗೆ ಹಾಯ್ ಎನಿಸಿದ್ದೇ ತಡ ಅದು ಯಾವ ನದಿ ಅಂತ ಹುಡುಕಲು ಆರಂಭಿಸಿದೆ. ನೇಮ್ ಪ್ಲೇಟ್ ಕಣ್ಣಿಗೆ ಬಿತ್ತು- ‘ಭೀಮಾ’. ಒಂದು ಕ್ಷಣ ಎದೆ ಝಲ್ ಎಂದಿತು.
ಪೂರ್ಣ ಓದಿಗೆ : ಮೀಡಿಯಾ ಮೈಂಡ್
0 ಪ್ರತಿಕ್ರಿಯೆಗಳು