ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹನಿಯೊಂದು ಉದುರಲಿಲ್ಲ, ಆಳದ ಸುಳಿಗೆ ಯಾರೂ ಇಳಿಯಲಿಲ್ಲ' – ಸ್ವರ್ಣ ಎನ್ ಪಿ

ಸ್ವರ್ಣ ಎನ್ ಪಿ

ಸಂಧ್ಯಾರಾಣಿ ಬರೆದ “ನಾ ಬರೆವ ಪ್ರತಿ ಅಕ್ಷರಕ್ಕೂ ಯುಗಗಳ ಬಾಯಾರಿಕೆಯಿದೆ.” ಎಂಬ ಸಾಲು ಓದಿದಾಕ್ಷಣ ರಾಧೆ , ಮೀರೆಯರ ದಾಹ ಮತ್ತೆ ನೆನಪಾಗಿತ್ತು . ಬಂದೇ ಬರುವನೆಂಬ ನಂಬಿಕೆಯೊಡನೆ ಕಾಯುವುದು ಕನಸಿನೂರಿಗೆ ದಾರಿಯಾದರೆ ಬರುವನೋ ಬಾರನೋ ಎಂಬ ಪ್ರಶ್ನೆ ಮಡುಗಟ್ಟಿದ ವಿಷಾದದ ಹೊನಲಿನಲ್ಲಿ ತೇಲಿಸುತ್ತದೆ . ಮಡುಗಟ್ಟಿದ ವಿಷಾದ ಎಂದೊಡನೆ ನನಗೆ ನೆನಪಾಗುವುದು ಗುಲ್ಜಾರರ ಕೆಲವು ಗೀತೆಗಳು . ಅದರಲ್ಲೊಂದು “मै एक सदी से बैटी हूँ…” ಹೃದಯನಾಥ್ ಮಂಗೇಶ್ಕರ್ ಸಂಗೀತ ನಿರ್ದೇಶನದಲ್ಲಿ , ಲತಾ ಮಂಗೇಶ್ಕರ್ ದನಿಯಲ್ಲಿ ಅದ್ಭುತವಾಗಿ ಮೂಡಿ ಬಂದ ಗೀತೆ .
ಕೆಳಗಿನ ಸಾಲುಗಳು ಮೂಡಲು ಮೇಲೆ ಹೇಳಿದ ಎಲ್ಲರೂ ಕಾರಣ . ಆದ್ದರಿಂದ ಇದು ಋಣದಲ್ಲರಳಿದ ಗೀತೆ

ಈ ಹಾದಿಯಲ್ಲಿ ಕಾದಿರುವೆ
ಕಾಲದ ಪರಿವೆ ಇಲ್ಲದೇ
ಮಣ್ಣ ಮೇಲೆ ಹೆಜ್ಜೆ ಮೂಡಲಿಲ್ಲ
ಆಳದ ಸುಳಿಗೆ ಯಾರೂ ಇಳಿಯಲಿಲ್ಲ
 
ಮುಚ್ಚಿದ ಕಣ್ಣ ಮುಂದೆ ತೇಲಿದವು
ಒಂದಷ್ಟು ಚಂದಿರನ ರಥಗಳು
ಆದರೆ , ಒಳಗಣ ಚಂದಿರ
ಅಂಗಳಕ್ಕಿಳಿಯಲಿಲ್ಲ
ಆಳದ ಸುಳಿಗೆ ಯಾರೂ ಇಳಿಯಲಿಲ್ಲ
 
ಮರಳಿನಂತೆ ಹಾರುತ್ತಿವೆ
ಹಗಲು ರಾತ್ರಿಗಳು
ಅಂಗಳದ ರಂಗವಲ್ಲಿಯ ಹಿಂದಿನ
ನೆರಳನು ಯಾರೂ ಹಿಡಿಯಲಿಲ್ಲ
ಆಳದ ಸುಳಿಗೆ ಯಾರೂ ಇಳಿಯಲಿಲ್ಲ
 
ಎಲ್ಲ ಜೋಳಿಗೆಗಳಲಿ
ಒಂದಷ್ಟ ತುಂಬುತ್ತಾನೆ ಆಕಾಶಜ್ಜ
ನಾ ರೆಪ್ಪೆ ತಿಕ್ಕಿ , ಹಿಂಡಿ ಹರವಿದರೂ
ಹನಿಯೊಂದು ಉದುರಲಿಲ್ಲ
ಆಳದ ಸುಳಿಗೆ ಯಾರೂ ಇಳಿಯಲಿಲ್ಲ
 

‍ಲೇಖಕರು G

23 March, 2015

6 Comments

  1. mallikarjun talwar

    angalada ranagavalliya hindina
    neralanu yaru hidiyalilla
    aalada sulige yaru iliyalilla
    ——-kaaliyada manada kalavala. istvaytu madam ji

    • ranganatha

      padyada saalugalu odisikolluatve ,kaavya chenagide

  2. sangeetha raviraj

    Modala baarige nimma kavite odiruve. Estavaytu

  3. mmshaik

    very nice..

  4. mahesh kalal

    thumba chennagide

  5. savitri hiremath

    achchagannada svachchavagi balakeyagide nimma kavanadalli.shubhashaya

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading