ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ವಾಮಿ, ದುಡ್ಡು ಮಡಗಿ..

Selfie book pratibha nandakumar

ಪ್ರತಿಭಾ ನಂದಕುಮಾರ್ 

ಅಕ್ಟೊಬರ್ ಒಂದರಂದು ಅಂತರರಾಷ್ಟ್ರೀಯ ಕಾಫಿ ದಿನ.

ಅವತ್ತು ಕಾಫಿ ಬೋರ್ಡ್ ಆವರಣದಲ್ಲಿ ನಾವು ಹಿಂದೆ ಐ ಎಫ್ ಎ ಗಾಗಿ ಮಾಡಿದ ಕಾಫಿ ಕೌಸ್ ಕಾವ್ಯದ ನಾಟಕೀಯ ಪ್ರಸ್ತುತಿ ಯನ್ನು ಮತ್ತೊಮ್ಮೆ ಮಾಡಬೇಕೆಂದು ಕಾಫಿ ಬೋರ್ಡ್ ನಿರ್ದೇಶಕರು ನಮಗೆ ಆಹ್ವಾನ ನೀಡಿದರು.

coffee pratibha2ನಾವು ಐದು ಜನ ಕಲಾವಿದರು ಹಾಗು ಐದು ಲೇಪಲ್ ಮೈಕ್ , ಊಟ, ಸಾರಿಗೆ ಎಲ್ಲವನ್ನು ಸೇರಿಸಿ ಸಣ್ಣ ಮೊತ್ತವನ್ನು ಮಾತ್ರ ಕೇಳಿದ್ದೆವು. ಅದಕ್ಕೆ ಅವರು ಒಪ್ಪಿಕೊಂಡು ನಮಗೆ ಈ ಮೇಲ್ ಕೂಡಾ ಕಳಿಸಿದ್ದರು.

ಒಂದರಂದು ನಾವು ಬೆಳಿಗ್ಗೆ ಹಾಗು ಸಂಜೆ ಎರಡು ಶೋ ಮಾಡಿದೆವು.

ಈಗ ಅವರಿಗೆ ದುಡ್ಡು ಕೇಳಿ ಇಂವಾಯ್ಸ್ ಕೊಟ್ಟರೆ ಅವರು ಹೇಳುತ್ತಿದ್ದಾರೆ, ಅವರ ಬೆಂಗಾಲಿ ಡೈರೆಕ್ಟರ್ ಗೆ ಅದು ಅರ್ಥವಾಗಲಿಲ್ಲ / ಇಷ್ಟವಾಗಲಿಲ್ಲವಂತೆ ಅದಕ್ಕೆ ದುಡ್ಡು ಕೊಡುವುದಿಲ್ಲವಂತೆ.

ಇದು ಯಾವ ನ್ಯಾಯ?

ಇದು ಕನ್ನಡದ ಕವಿ ಮತ್ತು ಕಲಾವಿದರಿಗೆ ನೀವು ಮಾಡುತ್ತಿರುವ ಅವಮಾನ ಅಂದೆ . ಅಲ್ಲವೇ?

‍ಲೇಖಕರು Admin

8 October, 2016

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Anonymous

    ಮೇಡಂ,
    ನಿಮ್ಮಲ್ಲಿರುವ ದಾಖಲೆಗಳನ್ನು ಒಬ್ಬ ಸಮರ್ಥ ವಕೀಲರಿಗೆ ತೋರಿಸಿ. ಕಾಫಿ ಬೋರ್ಡು ನಿರ್ದೇಶಕರನ್ನು ಕೋರ್ಟಿಗೆ ಎಳೆಯಲು, ನ್ಯಾಯ ದೊರಕಿಸಿಕೊಳ್ಳಲು ಸಾಧ್ಯವೇ ಎಂದು ಪರಿಶೀಲಿಸಿ. ಮತ್ತೆ ಅವರಿಗೆ ಕೊಡಬೇಕಾಗಬಹುದಾದ ಫೀಸು ಎಷ್ಟೆಂದು ಕೇಳಿ. ನಿಮಗೆ ಸಿಗಬೇಕಿರುವ ಮೊತ್ತ ವಕೀಲರು ಹೇಳಿದ ಫೀಸಿಗಿಂತ ಹೆಚ್ಚಾಗಿದ್ದರೆ ಧೈರ್ಯಮಾಡಿ ಮುಂದುವರೆಯಿರಿ, ಕಡಿಮೆಯಾದ್ರೆ ಈ ಪ್ರಕರಣವನ್ನು ಇಲ್ಲಿಗೇ ಬಿಟ್ಟುಬಿಡಿ. ನೀವು ಕೊಟ್ಟ ಮಾಹಿತಿಯಲ್ಲಿ ಇದಕ್ಕಿಂತ ಹೆಚ್ಚು ಏನೂ ಹೇಳಲು ಬರುವುದಿಲ್ಲ.
    ವಂದನೆಗಳೊಂದಿಗೆ,
    ಗೋಪೀನಾಥ ರಾವ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading