ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ವಾಮಿಯಾಗಬೇಕಾಗಿದ್ದ ಸಾಹಿತಿ!

mahantesh navalkal

ಮಹಾಂತೇಶ ನವಲಕಲ್ ಕಥಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಪಲ್ಲವ ಪ್ರಕಾಶನ ಅವರ ಕಥಾ ಸಂಕಲನವನ್ನು ‘ಭಾರತ ಭಾಗ್ಯ ವಿಧಾತ’ ಕೃತಿಯನ್ನು ಹೊರತಂದಿದ್ದಾರೆ. ಇದಕ್ಕೆ ಮೊನ್ನೆ ಮೊನ್ನೆ ತಾನೇ ಗುಲ್ಬರ್ಗ ವಿಶ್ವವಿದ್ಯಾಲಯ ಈ ಸಂಕಲನಕ್ಕೆ ಅತ್ಯುತ್ತಮ ಕಥಾ ಪುಸ್ತಕ ಬಹುಮಾನವನ್ನು ಘೋಷಿಸಿದೆ.

ಈಗ ವಿಷಯ ಅದಲ್ಲ.. ಮಹಾಂತೇಶ ನವಲಕಲ್ ಅವರು ತಮ್ಮ ಬದುಕಿನ ಒಂದು ಅಬ್ಬಾ!ಎನಿಸುವ ಘಟನೆಯನ್ನು ತೆರೆದಿಟ್ಟಿದ್ದಾರೆ

ನಿಮಗೆ ನಾನು ನನ್ನ ಬಗೆಗಿನ ಒಂದು ವಿಚಿತ್ರವಾದ ಸಂಗತಿ ಹೇಳಲೇಬೇಕು.

ನನ್ನನ್ನು ಇಂದಿನ ಮಹಾರಾಷ್ಟ್ರದ ಉದಗೀರ್ ನ ಹಾವಗಿಸ್ವಾಮಿ ಮಠಕ್ಕೆ ಸ್ವಾಮಿಗಳನ್ನಾಗಿ ಮಾಡಲಾಗಿತ್ತು. ಅದಕ್ಕಾಗಿ ನಾನು ಬಸವನ ಬಾಗೇವಾಡಿ ಮತ್ತು ಹರಪನಹಳ್ಳಿಯಲ್ಲಿ ಸಂಸ್ಕ್ರತ ಅಧ್ಯಯನ ಮಾಡಿದೆ.

ಹರಪನಹಳ್ಳಿಯಲ್ಲಿ ಮಾರ್ಕ್ಸ್ವಾದಿ ಚಿಂತಕ ಎಸ್ ಎಸ್ ಹಿರೇಮಠರ ಸಂಪರ್ಕದಿಂದ. ಸ್ವಾಮಿತ್ವದಿಂದ ಹೊರಬಂದೆ. ಇಲ್ಲದಿದ್ದರೆ ಶಿವನೇ ಏನಾಗುತ್ತಿದ್ದೆನೋ. ಆಗ ೧೩ ವರ್ಷವಿರಬಹುದು ಈ ಪೋಟೊದಲ್ಲಿ ನಾನು ಪುರಾಣ ಓದುತ್ತಿರುವದು ನೋಡಬಹುದು. ಈ ಫೋಟೋವನ್ನು ನನ್ನಣ್ಣ ಎಸ್ ಜಿ ಸ್ವಾಮಿಯವರ ಮಗ ಮಲ್ಲು ಎಸ್ ಜಿ ಸ್ವಾಮಿ ಕಳುಹಿಸಿದ್ದಾನೆ. ಹಳೆಯ ನೆನಪು ಗರಿಗೆದರಿಸಿದ್ದಕ್ಕೆ ಧನ್ಯವಾದ.

mahantesh navalakalmutt

‍ಲೇಖಕರು admin

7 December, 2015

2 Comments

  1. ramesh pattan

    ನೀವು ಸ್ವಾಮಿಗಳಾಗಿದ್ದರೆ ಚನ್ನಾಗಿತ್ತು. ramesh pattan

  2. ramesh pattan

    ನೀವು ಸ್ವಾಮಿಗಳಾಗಿದ್ದರೆ ಚನ್ನಾಗಿತ್ತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading