ಮಹಾಂತೇಶ ನವಲಕಲ್ ಕಥಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಪಲ್ಲವ ಪ್ರಕಾಶನ ಅವರ ಕಥಾ ಸಂಕಲನವನ್ನು ‘ಭಾರತ ಭಾಗ್ಯ ವಿಧಾತ’ ಕೃತಿಯನ್ನು ಹೊರತಂದಿದ್ದಾರೆ. ಇದಕ್ಕೆ ಮೊನ್ನೆ ಮೊನ್ನೆ ತಾನೇ ಗುಲ್ಬರ್ಗ ವಿಶ್ವವಿದ್ಯಾಲಯ ಈ ಸಂಕಲನಕ್ಕೆ ಅತ್ಯುತ್ತಮ ಕಥಾ ಪುಸ್ತಕ ಬಹುಮಾನವನ್ನು ಘೋಷಿಸಿದೆ.
ಈಗ ವಿಷಯ ಅದಲ್ಲ.. ಮಹಾಂತೇಶ ನವಲಕಲ್ ಅವರು ತಮ್ಮ ಬದುಕಿನ ಒಂದು ಅಬ್ಬಾ!ಎನಿಸುವ ಘಟನೆಯನ್ನು ತೆರೆದಿಟ್ಟಿದ್ದಾರೆ
ನಿಮಗೆ ನಾನು ನನ್ನ ಬಗೆಗಿನ ಒಂದು ವಿಚಿತ್ರವಾದ ಸಂಗತಿ ಹೇಳಲೇಬೇಕು.
ನನ್ನನ್ನು ಇಂದಿನ ಮಹಾರಾಷ್ಟ್ರದ ಉದಗೀರ್ ನ ಹಾವಗಿಸ್ವಾಮಿ ಮಠಕ್ಕೆ ಸ್ವಾಮಿಗಳನ್ನಾಗಿ ಮಾಡಲಾಗಿತ್ತು. ಅದಕ್ಕಾಗಿ ನಾನು ಬಸವನ ಬಾಗೇವಾಡಿ ಮತ್ತು ಹರಪನಹಳ್ಳಿಯಲ್ಲಿ ಸಂಸ್ಕ್ರತ ಅಧ್ಯಯನ ಮಾಡಿದೆ.
ಹರಪನಹಳ್ಳಿಯಲ್ಲಿ ಮಾರ್ಕ್ಸ್ವಾದಿ ಚಿಂತಕ ಎಸ್ ಎಸ್ ಹಿರೇಮಠರ ಸಂಪರ್ಕದಿಂದ. ಸ್ವಾಮಿತ್ವದಿಂದ ಹೊರಬಂದೆ. ಇಲ್ಲದಿದ್ದರೆ ಶಿವನೇ ಏನಾಗುತ್ತಿದ್ದೆನೋ. ಆಗ ೧೩ ವರ್ಷವಿರಬಹುದು ಈ ಪೋಟೊದಲ್ಲಿ ನಾನು ಪುರಾಣ ಓದುತ್ತಿರುವದು ನೋಡಬಹುದು. ಈ ಫೋಟೋವನ್ನು ನನ್ನಣ್ಣ ಎಸ್ ಜಿ ಸ್ವಾಮಿಯವರ ಮಗ ಮಲ್ಲು ಎಸ್ ಜಿ ಸ್ವಾಮಿ ಕಳುಹಿಸಿದ್ದಾನೆ. ಹಳೆಯ ನೆನಪು ಗರಿಗೆದರಿಸಿದ್ದಕ್ಕೆ ಧನ್ಯವಾದ.
ನೀವು ಸ್ವಾಮಿಗಳಾಗಿದ್ದರೆ ಚನ್ನಾಗಿತ್ತು. ramesh pattan
ನೀವು ಸ್ವಾಮಿಗಳಾಗಿದ್ದರೆ ಚನ್ನಾಗಿತ್ತು.