ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ- ನೆತ್ತರಲ್ಲ..!

ಸಂಘಮಿತ್ರೆ ನಾಗರಘಟ್ಟ

—–

ಮುಂಜಾವಿನಲಿ

ಲೈಟು ಕಂಬಕ್ಕೆ 

ನೇವರಿಸುವಂತಿದ್ದ

ನನ್ನ ರೆಂಬೆಗಳ- 

ತಳುಕಿಗಾಗಿ ಕತ್ತರಿಸಿ

ಕೊಳ್ಳುವ ನಿಮ್ಮ

ತಲೆಗೂದಿನಲಿನಂತೆ, 

ಒಂದೆಡೆಯಿಂದ ಟ್ರಿಂ 

ಮಾಡಿ – ನೆಲಕ್ಕೆ ಬಿದ್ದ

ಪುಡಿಗೂದಲು  ಕಾಣಿಸದಂತೆ

ಮೊರದಲ್ಲಿ ನಾಜೂಕಾಗಿ

ಬಾಚಿಕೊಳ್ಳುವಂತೆ ,

ನನ್ನ ಎಲೆಗಳ – ಆನೆಯೊಂದು 

ದೊಡ್ಡ ಚೆಂಡಿನಾಕಾರದ 

ಮುದ್ದೆಯನ್ನು ಒಂದೇ 

ಗುಟುಕಿಗೆ ನುಂಗುವಂತೆ

ಜೆ‌.ಸಿ.ಬಿ ಯ ತುದಿಯಲ್ಲಿ 

ಬಳಿದುಕೊಂಡ ನೀವು – 

ನನ್ನನ್ನು ನೇರವಾಗಿ 

ಸುಡಲಾಗದೆ ಕತ್ತಲಿಗೆ 

ಕಾದು ಆಡಂಬರದ 

ಬೆಳಕಿನ ಬುಡ್ಡಿಗಳನ್ನು

ನನ್ನ ಮೈಗೆ ಸುತ್ತಿದ್ದೀರಿ.., 

ಇದರಿಂದ ನಿಮ್ಮ ಕಣ್ಣುಗಳಿಗೆ

ತಂಪಾಗುವುದಾದರೆ ..

ಇರಲಿ ಬಿಡಿ ! ನಾನು

ನಿಮ್ಮಂತೆ ಕುದಿ ರಕ್ತವ

ಹೊಂದಿಲ್ಲ . ನೀವೀಗಲೂ 

ನನ್ನ ದೇಹವ ತುಂಡು

ಮಾಡಿದರೆ ಸಿಗುವುದು

ಹಾಲಿನಂತ ಬಿಳಿ ನೊರೆ

ಹೊರತು ಕಣ್ಣು ಕುಕ್ಕುವ

ನೆತ್ತರಲ್ಲ….!!!!

‍ಲೇಖಕರು avadhi

8 October, 2023

1 Comment

  1. prathibha nandakumar

    ತುಂಬಾ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading