ಈ ಹುಡುಗ ಸುನಿಲ್ ಮೈಸೂರು . ನೀವೆಲ್ಲರೂ ‘ಬಾರಿಸು ಕನ್ನಡ ಡಿಂಡಿಮವ’ ಕೇಳಿಯೇ ಇರುತ್ತೀರಿ ಆದರೆ ಈ ಸುನಿಲ್ ನಿರ್ದೇಶನದ, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿರುವ ಅದೇ ಹಾಡನ್ನು ನೋಡಿದರೆ ವಾಹ್! ಎನಿಸುತ್ತದೆ. ಈ ಕಾಲಕ್ಕೆ ಕನ್ನಡದ ದಿಗ್ಗಜರನ್ನು ಬೆಸುಗೆ ಹಾಕುವುದು ಹೇಗೆ?, ಈಗಿನ ಐ ಟಿ -ಬಿ ಟಿ ಕಾಲದಲ್ಲಿ ಕನ್ನಡದ ಕೃತಿಗಳ ಸಂಪನ್ನತೆಯನ್ನು ದಾಟಿಸುವುದು ಹೇಗೆ? ಎಂದು ಚಿಂತಿಸುವವರಿಗೆ ಇಲ್ಲಿ ಉತ್ತರವಿದೆ. ಬಸವಲಿಂಗಯ್ಯ ‘ಮಲೆಗಳಲ್ಲಿ ಮದುಮಗಳು’ ಮೂಲಕ ಅದೇ ಕೆಲಸ ಮಾಡಿದ್ದರು. ಸುನಿಲ್-ತೇಜಸ್ವಿ ಜೋಡಿ ಈಗ ಇನ್ನೊಂದು ಹೆಜ್ಜೆ ಹಾಕಿದೆ. ಅದರ ವಿಡಿಯೋ ಇಲ್ಲಿ ನೀಡುತ್ತಿದ್ದೇವೆ.
ಅದಿರಲಿ, ಇಲ್ಲಿ ಶಹಬಾಶ್ ಹೇಳಬೇಕಾದದ್ದು ರಾಜ್ಯ ಸರ್ಕಾರಕ್ಕೆ ಹಾಗೂ ವಾರ್ತಾ ಇಲಾಖೆಗೆ. ಹೊಸ ಪ್ರಯೋಗ ಎಂದರೆ ಸಾಕು ಮೂಗು ಮುರಿಯುವ, ನಮ್ಮ ಕಾಲವೇ ಚೆನ್ನ ಎಂದು ತುರುಬು ಮುಟ್ಟಿ ನೋಡಿಕೊಳ್ಳುವವರ ಮಧ್ಯೆ ವಾರ್ತಾ ಇಲಾಖೆ ಈ ಪ್ರಯೋಗಕ್ಕೆ ಬೆನ್ನುಲುಬಾಗಿ ನಿಂತಿದೆ.
ಕಂಗ್ರಾಟ್ಸ್ ವಿಶುಕುಮಾರ್..
A beautiful coordination of modern and janapada! Well done! Hats off!
Very beautiful. Thumbs up guys.
ತುಂಬಾ ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ.
tumba chennagide !!