ಲಂಕೇಶ್ -1

ನಾನು ಅರಿಯಲು
ಯತ್ನಿಸಿದಷ್ಟೂ ಕಗ್ಗಂಟಾಗುವ
ಅವಳ ವರ್ತನೆಯ
ನೆನೆಯುತ್ತಿದ್ದೆ.
ಅವಳು ನಿನ್ನ ಒಳದನಿ
ಅಂದು ಚಕಿತಗೊಳಿಸಿದಿರಿ.
ಈಗ ನನ್ನನ್ನು ನಾನು ಹೇಗೆ
ತಿಳಿಯಲಿ ಗುರುವೆ?
ಲಂಕೇಶ್ -2

ಮುಸ್ಸಂಜೆಯ ಕಥಾ
ಪ್ರಸಂಗದಲ್ಲಿ ಉಮಾಪತಿಯಾಗಿ
ಸೇರಿಕೊಳ್ಳಲೇ ಎಂದು ಕೇಳಿದ್ದಕ್ಕೆ
ವಾಮನನಾಗು ಎಂದು ಶಪಿಸಿದ್ದೇಕೆ?
ಸಾವಂತ್ರಿ ನನ್ನೊಳಗೆ ಹುಟ್ಟಿ
ನನ್ನೊಳಗೆ ಬದುಕುತ್ತಿರುವ
ಸತ್ಯವನ್ನು ನೀವು ನಿರಾಕರಿಸಲಾರಿರಿ.
ಲಂಕೇಶ್ -3

ನಿಮ್ಮನ್ನು ಓದುತ್ತಾ
ಬೆಳೆದವರು ಕ್ರಮೇಣ
ನಿಮ್ಮಿಂದ ಬರೆಸಿಕೊಳ್ಳಲು
ಅಪರಾಧಗಳ ಮಾಡತೊಡಗಿ
ಎಲ್ಲವೂ ದೈವನಿಯಾಮಕ
ಅನ್ನಿಸುವ ಹೊತ್ತಿಗೆ ನೀವು
ನಿರ್ಗಮಿಸಿದಿರಿ. ನಿಮ್ಮನ್ನು ಅನುಕರಿಸಿದವರು
ದಿವಂಗತರಾದರು.
ಲಂಕೇಶ್ -4

ನೀವು ಬೆಳ್ಳಂಬೆಳಗ್ಗೆ
ಬೈಸಿಕಲ್ ಕಲಿಸಿದ ಹುಡುಗಿ
ನಿಮ್ಮ ತೋಟದಲ್ಲಿ ಹೂ ಬಿಟ್ಟ
ಹುಳಿ ಮಾವಿನ ಮರ
ನಿಮ್ಮ ನೀಲುವನ್ನು
ನನ್ನ ಪರಿಸರದಲ್ಲೂ ಹುಡುಕಿದೆ.
ನಿಮ್ಮ ಕನ್ನಡಕ ಮಾತ್ರ
ಕೊನೆಗೂ ಸಿಗಲಿಲ್ಲ.
ಲಂಕೇಶ್ -5

ಚಂಚಲೆಯನ್ನು
ಭಗವದ್ಗೀತೆಯಂತೆ
ಕೇಡಿಗಳನ್ನು
ಅಡಿಗರ ಪದ್ಯದಂತೆ
ಪುಟ್ಟ ಪೋರರನ್ನು
ನೀಲುವಿನ ಏದುಸಿರಿನಂತೆ
ಗರತಿಯರನ್ನು
ಬೋದಿಲೇರ್ ಪದ್ಯದಂತೆ
ಕುಡಿದು ಮತ್ತೇರಿಸಿಕೊಂಡೆವು.
ನೀವು ಕೆನ್ನೆಯ ಮೇಲೆ ಕೈಯಿಟ್ಟು
ಕೌದಿ ಹೊದ್ದು ಕೂತುಬಿಟ್ಟಿರಿ.
(ಇನ್ನೂ ಇದೆ.. ಆಗಾಗ ನಿಮ್ಮ ಮುಂದೆ..)
ಲಂಕೇಶರ ನೆನೆದು ನೀಲು ಶೈಲಿಯ ಪದ್ಯಗಳು
ನಿಮಗೆ ಇವೂ ಇಷ್ಟವಾಗಬಹುದು…






tumba chennaagive sir..
ನಿಮ್ಮ ಕನ್ನಡಕ ಮಾತ್ರ
ಕೊನೆಗೂ ಸಿಗಲಿಲ್ಲ
Beautiful lines
ನಿಮ್ಮನ್ನು ಅನುಕರಿಸಿದವರು
ದಿವಂಗತರಾದರು…
…ನಿಜಕ್ಕೂ ಅದ್ಭುತ ಸಾಲುಗಳು ಸಾರ್! ನೀವು ಹೇಳಿದ್ದೂ ಸತ್ಯ!!
-ಸತೀಶ್ಬಾಬು
Chenda ide … next aagaaga yaavaga …?
ನಿಮ್ಮ ಕನ್ನಡಕ ಮಾತ್ರ
ಕೊನೆಗೂ ಸಿಗಲಿಲ್ಲ.-nijakkU padya gelluvudE iMthalli
padyagalu tumbaa chennagive – srinivas deshpande