ಕರೊನಾ ಮಾಯೆ
ಭೂಮಿಕಾ ಎಸ್ ತಗಡೂರು
ಮಾತು ನಿಶಬ್ಧವಾಯಿತು
ನಿಶಬ್ಧ, ನೀರವ ಮೌನವಾಯಿತು
ಪರಿಕಲ್ಪನೆಗಳು, ಆಲೊಚನೆಗಳಾದವು
ಆಲೋಚನೆಗಳಲ್ಲೂ ತಪ್ಪದು
ಆ ದೇವರ ಸಂಚಲನೆ
ಸಂಜೆ ತಂಪಾದ ಗಾಳಿ
ಜೊತೆ ಕರೊನಾದ ಭೀತಿ
ಯಾವ ಪರಿ ನಮ್ಮ ಪ್ರಣ ಹಿಂಡುತ್ತದೆ ಎನ್ನುವ ರೀತಿ
ಮುಕ್ತಿ ಸಿಗುತ್ತದೆಯಾ
ಈ ಮಹಾಮಾರಿ ಕರೊನಾಗೆ?
ಮುಕ್ತವಾಗಿ ಇರಬಹುದೇ
ಮುಂಚೆಯ ಹಾಗೇ?
ಜಗತ್ತಿನ ವಿನಾಶದಲ್ಲೂ,
ನಗೆ ಬೀರುತ್ತಿದೆ
ಮಾನವೀಯ ಗುಣಗಳ
ಪ್ರೀತಿಯ ಛಾಯೆ
ರಕ್ತ ಸಂಬಂಧಗಳ
ನೋವಿನ ಚೀರಾಟವನ್ನೂ
ಕಡಿದು ಹಾಕುತ್ತಿದೆ
ಈ ಕರೊನಾ ಎಂಬ ಮಾಯೆ
ಆದಷ್ಟು ಬೇಗ
ಕೋವಿಡ್-19 ಗೆ
ಆಗಲ್ಲೊಂದು ಸಮಾಪ್ತಿ
ತರಲಿ,
ಎಲ್ಲರ ಮನಸಿನಲ್ಲೂ
ಸಮಾಧಾನ, ಸಂತೃಪ್ತಿ






0 Comments