ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಯವೋ, ಮಾಯದ ಗಾಯವೋ..ನವೆಯೋದು ನಿಂತಿಲ್ಲ ಎದೆಯಲ್ಲಿ

ಖಂಜೂಸು ಬದುಕಿನ ಜೊತೆಗೆ…

– ಮಂಜುನಾಯಕ್ ಚೆಲ್ಲೂರ್

ಸಣ್ಣಗೆ ಹನಿಯುತಿದೆ ಮಳೆಯಿನ್ನೂ ಮನದ ಬೀದಿಯ ಮೇಲೆ..

ಮಾಯವೋ? ಮಾಯದ ಗಾಯವೋ? ನವೆಯೋದು ನಿಂತಿಲ್ಲ ಎದೆಯಲ್ಲಿ.
 
ಸುತ್ತೆಲ್ಲ ಕವಿದಿರೋ ಸಂತೆ ಗದ್ದಲದಲ್ಲೂ ಕೇಳುತಿದೆ ಹಾಡೊಂದು ನಂಗಷ್ಟೆ..
ಕತೆಯೊಂದು ಪಟ್ಟಾಗಿ ಕುಳಿತು ಆಕಳಿಸುತಿದೆ ಎದೆಯ ಜಗುಲಿಯ ಮೇಲೆ:
 
ಸುಟ್ಟರೂ ಸುಗಂಧ ಸವೆಯದ ಸುರಗಿ ಹೂವಿನಂಥ ನೆನಪುಗಳು,
ಕಲ್ಲಾಕಿದರೂ ಸಾಯದ ಕಲ್ಲು ಭಾವಗಳು, ಆಗಾಗ ಚುಚ್ಚುವ ತೆಗೆಯದೇ ಬಿಟ್ಟ ಚಪ್ಪಲಿಯೊಳಗಿನ ಮುಳ್ಳುಗಳು..
 
ಖಂಜೂಸು ಬದುಕ ಜೊತೆಗಿನ ವಶೀಲಿಯಲ್ಲಿ ಸೋತು ಸುಣ್ಣವಾಗದಿದ್ದಷ್ಟೇ ಸಾಕು ಕನಸುಗಳು
 
 

‍ಲೇಖಕರು G

3 November, 2014

2 Comments

  1. mmshaik

    chennaagide kavite..apurNa anisitu..

  2. manjunayak

    thank you mmshaik

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading