ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎಂ ಬಶೀರ್ ಹೊಸ ಕವಿತೆ- ದೀಪಾವಳಿಯ ದಿನ

ಬಶೀರ್ ಬಿ.ಎಂ.

—–

ದೀಪಾವಳಿಯ ದಿನ

ಮನೆಬಾಗಿಲಲ್ಲಿ

ಎರಡು ಹಣತೆಗಳನ್ನು ಹಚ್ಚಿಟ್ಟೆ

ಈದ್ ನ ದಿನ ಖೀರ್ ಮಾಡಿ

ನೆರೆ ಮನೆಗಳಿಗೆಲ್ಲ ಹಂಚಿ ಬಿಟ್ಟೆ

ಕ್ರಿಸ್ ಮಸ್ ದಿನ ನಕ್ಷತ್ರವೊಂದನ್ನು

ಹೆಬ್ಬಾಗಿಲಲ್ಲಿ ತೂಗು ಬಿಟ್ಟೆ

ಯಾರೋ ಕೇಳಿದರು

“ನಿಮ್ಮ ಧರ್ಮ ಯಾವುದು ?”

ದೀಪಾವಳಿಯ ಹಣತೆ

ಈದ್ ನ ಖೀರ್

ಕ್ರಿಸ್ಮಸ್ ನ ನಕ್ಷತ್ರ

ನನ್ನ ಧರ್ಮ

ಹೋ ಹೌದೇ …

ಮುಗುಳ್ನಕ್ಕರು

ಆ ನಗುವಿನಲ್ಲಿ ಹಣತೆಯ ಬೆಳಕು

ಖೀರ್ ನ ಸಿಹಿ

ನಕ್ಷತ್ರಗಳ ಹೊಳಪು !

‍ಲೇಖಕರು avadhi

11 November, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading