ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಯಸಿದ್ದು ಏಕಾಂತ, ದಕ್ಕಿದ್ದು ಏಕಾಂಗಿತನ 

ನವಮಿ ಪ್ರಾರ್ಥನೆ

ಮುಕುಂದಾ ಬೃಂದ

ಬಯಸಿದ್ದು ಏಕಾಂತ
ದಕ್ಕಿದ್ದು ಏಕಾಂಗಿತನ
ಇದಕಲ್ಲವೇ ಹೇಳೋದು
man proposes and god disposes

ಆದರೂ ಒಂದು ಜಿಜ್ಞಾಸೆ
ನೆನಪುಗಳೇ ತುಂಬಿರಲು
ಭಾವಗಳು ಜೊತೆಯಿರಲು
ಏಕಾಂಗಿ ಎಲ್ಲಿ ಏಕಾಂತವೆಲ್ಲಿ ?

ಸಮಾದಿ ಯೋಗದರಿವಿಲ್ಲ
ಸಂಸಾರದಪೇಕ್ಷೆ ತೀರಿಲ್ಲ
ವೈರಾಗ್ಯವೆಲ್ಲಿಂದಬರಬೇಕು
ಜೀವ ಚಪಲದ ಸಿಹಿಕಹಿಯ ಜೀವನದಲಿ ?

ನೀರೆರೆದು ಬೆಳೆಸಬೇಕು ಉತ್ಸಾಹ
ಬತ್ತಿಹೋದ ತೊರೆಯಲ್ಲಿ ನೀರೆಲ್ಲಿದೆ ?
ಮಳೆಗೆ ಹಾತೊರೆದು ಕುಳಿತಿರೆ
ಮತ್ತದೇ ಉದಾಸ ಉಪದ್ರವ ಕಾಡಾಟ

ಋತುಮಾನ ಬದಲೀತು
ತುಂತುರು ಹನಿ ಉದುರೀತು
ಕಾದಿಹೆನು ಶಬರಿಯಂತೆ
ಹೇ ಶ್ರೀರಾಮ ಕರುಣಿಸೂ ಸ್ವೀಕರಿಸಿ ನವಮಿ ಪ್ರಾರ್ಥನೆಯ …

‍ಲೇಖಕರು avadhi

15 April, 2019

1 Comment

  1. Anand

    ಬಹಳ ಸೊಗಸಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading