ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನು ಮಾತ್ರ ಎದೆಯಲ್ಲೇ ಜ್ವಲಿಸುತ್ತಿದ್ದೆ..

ನೆಲಕ್ಕೆ ಬೆಂಕಿ ಬಿದ್ದ ದಿನ

ಸ್ಪೂರ್ತಿ ಗಿರೀಶ್ 

೧.
ನೆಲಕ್ಕೆ ಬೆಂಕಿ ಬಿದ್ದ ದಿನ
ಹಸಿರು ಕೋಟೆ ಕೊತ್ತಲ
ಎಲ್ಲಾ ಎಲ್ಲಾ ಉರಿದು ಹೋದವು

f9547923ed82c12c0c87cd1fc3b45727ನೀನು ಮಾತ್ರ ಎದೆಯಲ್ಲೇ
ಜ್ವಲಿಸುತ್ತಿದ್ದೆ
ಸಾವಿರ ಸಾವಿರ
ಹುಣ್ಣಿಮೆ ಚಂದ್ರರ ತೂಗಿಕೊಂಡು

೨.

ನೆಲಕ್ಕೆ ಬೆಂಕಿ ಬಿದ್ದ ದಿನ

ಬೆಂಕಿ ಹಚ್ಚಿದವ
ದೂರದಲ್ಲಿ ನಿಂತು
ಕೈ ಚಪ್ಪಾಳೆ
ಬಡಿದು ತಾಂಡವ ನೃತ್ಯ ಮಾಡುತ್ತಿದ್ದ

ಇಂಚಿಂಚು ಆವರಿಸಿದ ಕಾವಿಗೆ
ತಣ್ಣಗೆ ಕೊರೆವ ನಾನು
ಬೆಚ್ಚಿದೆ
ಬೆಂಕಿಯ ದಳಗಳು ಮೈಚಾಚಿ
ನಾಲಿಗೆ ಹೊರಚಾಚಿ
ಉದ್ದ ಆಗಲಕ್ಕೂ ಹಬ್ಬಿ
ನನ್ನ
ಇಡಿಯಾಗಿ ಇಲ್ಲವಾಗಿಸಿದವು

ನನ್ನ ಖಾಲಿಮಾಡಿಕೊಂಡ ಮೇಲಷ್ಟೇ
ಒಳಗೆ
ಒಂದೊಂದಾಗಿ ಬೂದಿಯಲ್ಲಿದ್ದ
ನಿನ್ನ ಹೆಜ್ಜೆಗಳನ್ನಾಯ್ದು
ತುಂಬಿಕೊಂಡೆ


ನೆಲಕ್ಕೆ ಬೆಂಕಿ ಬಿದ್ದ ದಿನ
ಸಾವಿರ ಧರ್ಮಗಳು ಕೊಚ್ಚಿಹೋದವು
ಪ್ರೇಮಿಗಳು
ಅವರ ಪ್ರೀತಿ ಪಾತ್ರರ
ತೋಳಿನಲ್ಲೇ ಉಳಿದು ಹೋದರು

೪.
ನೆಲಕ್ಕೆ ಬೆಂಕಿ ಬಿದ್ದ ದಿನ
ಎಲ್ಲಾ ಚೌಕಟ್ಟು ಹರಿದುಹೋದವು
ಕಾನೂನು ಕಟ್ಟಲೆ ಮುರಿದು ಹೋದವು
ಬೌದ್ಧಿಕರು ಚಾವಡಿಗಳಿಂದ
ಉಟ್ಟ ಬಟ್ಟೆಯಲ್ಲಿ ಬೀದಿಗೆ ಬಿದ್ದರು
ಎಲ್ಲಾರ ಕಣ್ಣುಗಳೇ ಕಳಚಿ ಬಿದ್ದವು

೫.
ನೆಲಕ್ಕೆ ಬೆಂಕಿ ಬಿದ್ದ ದಿನ
ಒಬ್ಬ ತಾಯಿ
ತನ್ನ ಮಕ್ಕಳೊಂದಿಗೆ ರೆಕ್ಕೆ ಕಟ್ಟಿಕೊಂಡು ಆಕಾಶಕ್ಕೆ ಹಾರಿಹೋದಳು

‍ಲೇಖಕರು Admin

17 June, 2016

3 Comments

  1. shama nandibetta

    “ಪ್ರೇಮಿಗಳು
    ಅವರ ಪ್ರೀತಿ ಪಾತ್ರರ
    ತೋಳಿನಲ್ಲೇ ಉಳಿದು ಹೋದರು

    ಬೌದ್ಧಿಕರು ಚಾವಡಿಗಳಿಂದ
    ಉಟ್ಟ ಬಟ್ಟೆಯಲ್ಲಿ ಬೀದಿಗೆ ಬಿದ್ದರು
    ಎಲ್ಲಾರ ಕಣ್ಣುಗಳೇ ಕಳಚಿ ಬಿದ್ದವು”

    Beautiful

    • Spoorthi Girish

      ಧನ್ಯವಾದಗಳು Shama , ಧನ್ಯವಾದಗಳು ಅವಧಿ.

  2. ಗೋನವಾರ ಕಿಶನ್ ರಾವ

    ಪ್ರೇಮಕ್ಕೆ ಇರುವ ಶಕ್ತಿ ಅಸದಳವಾದುದು ಎನ್ನುವುದು ಪ್ರತಿ ಸಾಲಿನಲ್ಲಿ ಪ್ರತಿಬಿಂಬಿಸಿದೆ.ಸಾವಿರ ಧರ್ಮಗಳನ್ನು ಕೊಚ್ಚುವ ಶಕ್ತಿ ಅದು. ಸಾರ್ಥಕ ಕವನ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading