ಕವಿತೆ
ಅಕ್ಷಯ ಕಾಂತಬೈಲು

ನಾಳೆಗೆ ಕೊನೆ
ನಾಳೆಯಿಂದ ಕತ್ತಲು
ನೇಸರನನ್ನು ಬಳ್ಳಿಯಿಂದ
ಬಿಗಿದಿರುವೆ
ಇನ್ನು ಹಗಲು ಮರಿಚಿಕೆ
ಸಪ್ತ ಸಾಗರಗಳ ನೀರನ್ನೆಲ್ಲಾ
ಕುಡಿದಿರುವೆ
ಜಾಗವನ್ನು ಕೊಳ್ಳಬಹುದು
ಭೂಪಟ ಬದಲಾಯಿಸಿ ಬಿಡಿ
ಶಯನಗೃಹದಲ್ಲಿ ಜನರನ್ನೆಲ್ಲಾ
ಬಂಧಿಸಿರುವೆ
ಮನುಕುಲವೆಂಬುವುದು
ನಾಳೆಗೆ ಕೊನೆ






tumba chennaagide..
akshay, nee chennagi kavite bareyuve.abhinandanegalu.-smitha
ಚೆನ್ನಾಗಿದೆ. ಮರಿ/ಮರೀಚಿಕೆ ಅಲ್ವೇ ಮರಿ ! 🙂
mmshaik,ಸ್ಮಿತಾಕ್ಕಂಗೆ, ಶಂಕರನ್ ಸರ್ಗೆ ಧನ್ಯವಾದಗಳು , ತಪ್ಪಿದೆ ಮರೀಚಿಕೆ ಸರಿ