ಎರಡು ‘ಕಬೀರ ದೋಹೆ’ಗಳು…
ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ, ಅರ್ಥವ್ಯತ್ಯಾಸವಾಗದ ಹಾಗೆ, ಹಾಡಲು ಸುಲಭವಾಗಲೆಂಬ ಉದ್ದೇಶದಿಂದ ಮಾಡಿದ ಸರಳ ಅನುವಾದಗಳಿವು
1
ಮಾಯೆ ಸಾಯಲಿಲ್ಲ, ದೇಹದ ಮೋಹ ಸಾಯಲಿಲ್ಲ –
ಮರುಮರುಗಿ ಮರಣವನು ಅಪ್ಪಿತು ಮನುಜನ ಈ ಶರೀರ…
ಆಸೆ ಸಾಯಲಿಲ್ಲ, ಮನದ ದಾಹ ಸಾಯಲಿಲ್ಲ –
ಹೀಗೇ ಹೇಳುತ ಹಾಡುತ ಪಾಡುತ ಸಾಗಿದ ತಾನು ಕಬೀರ…
(ಮೂಲ ಹಿಂದಿ :
ಮಾಯಾ ಮರಿ ನಾ ಮನ ಮರಾ, ಮರ ಮರ ಗಯೇ ಶರೀರ
ಆಶಾ ತೃಷ್ಣಾ ನಾ ಮರಿ, ಕಹ ಗಯೇ ದಾಸ ಕಬೀರ…)
2
ಎಷ್ಟು ತುಳೀತಿ ತುಳೀ ತುಳೀ… ಅಂದಿತು ಕುಂಬಾರಗೆ ಮಣ್ಣು…
ಕೇಳೋ ಒಂದಿಲ್ಲೊಂದು ದಿನ, ನಾನೂ ತುಳಿಯುವೆ ನಿನ್ನನ್ನು…! ಮುಚ್ಚಿದಾಗ ನೀನು ಕಣ್ಣು…
(ಮೂಲ ಹಿಂದಿ :
ಮಾಟಿ ಕಹೇ ಕುಮ್ಹಾರ ಸೆ, ತೂ ಕ್ಯಾ ರೌಂದೆ ಮೋಯ್…?
ಏಕ ದಿನ ಐಸಾ ಆಯೇಗಾ, ಮೈ ರೌಂದೂಂಗಿ ತೋಯ್…!)








ವ್ಹಾವ್!!! ಅದ್ಭುತ ಸಾಲುಗಳು….
ಧನ್ಯವಾದಗಳು ಗೋಪಾಲ ವಾಜಪೇಯಿಯವರಿಗೆ.
thanks sir!
ಅದ್ಭುತ ಸರ್ ,
ಸರ್ ನಾನೂ ಕೆಲವು ಕಬೀರ ದೋಹೆಗಳ ಅನುವಾದ ಮಾಡಿದ್ದೇನೆ, ಒಮ್ಮೆ ನನ್ನ ಬ್ಲಾಗ್ ಭೇಟಿ ನೀಡಿ ನೋಡಿ ಸರ್.
http://www.harishshettyshirva.blogspot.com
ಅತ್ಯಂತ ಅರ್ಥಪೂರ್ಣವಾದ ಮಾತುಗಳು ಸರ್
ಪ್ರತಿಯೊಬ್ಬ ಮನುಷ್ಯ ತಿಳಿಯಬೇಕಾದ ಅವಶ್ಯಕತೆಯಿದೆ
ಸುಂದರ , ಬಹಳ ಸುಂದರ. ಇನ್ನಷ್ಟು ಬೇಕೆನಿಸುತ್ತಿದೆ.
ಆ ದಿನ ಪುಸ್ತಕ ಬಿಡುಗಡೆ ಸಮಾರಂಭದ ಸಂಧರ್ಭದಲ್ಲೇ ಇವುಗಳ ರುಚಿ ಸವಿದು ವಾವ್ ಅನ್ನಿಸಿತ್ತು. ಅದನ್ನ ಮತ್ತೆ ದಕ್ಕಿಸಿ ಕೊಟ್ರೀ.. ಚೆಂದದ ಅನುವಾದಗಳು. ದೊರಕಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸಾರ್.. 🙂