ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಬದುಕಿಸುವುದು ರೊಟ್ಟಿಯೇ ಎನಿಸಿತ್ತು..

ಮತ್ತೆ ದ್ವಿಪದಿಗಳು

– ಬಸವರಾಜ ಸೂಳಿಬಾವಿ

ಲಡಾಯಿ ಪ್ರಕಾಶನ

ನಿನ್ನ ಬಳಿಗೆ ನಾ ಪೌರುಷ ತುಂಬಿಕೊಂಡವನ ಹಾಗೆ ಬಂದಿರಲಿಲ್ಲ

ನೀ ಸೋಲು ಗೆಲುವು ಹುಡುಕುವಾಗ ಪ್ರೇಮದ ತುಟಿ ಲಜ್ಜೆಯಿಂದ ನಡುಗಿದವು

ಬೆಳಗು ಅಂಗಳದಲಿ ಅದೇ ಅರಳಿದ ಹೂ ಕಿತ್ತು ನಿನಗೆ ಮುಡಿಸಿದೆ

ಎಂದೊ ಸತ್ತ ಹಿಟ್ಲರ್ ನನ್ನ ಕೈಯಲ್ಲಿಯೆ ಬದುಕಿ ಬಂದಂತೆನಿಸಿತು

ಕೋಳಿ ಕೂಗಿದಾಗ ಬೀದಿ ಬಾಗಿಲು ಬಾಯಿ ತೆರೆಯಿತು

ಕನಸಿನ ಮೇಲೆ ಕಾಲೂರಿ ಬಂದ ಹೆಜ್ಜೆಸದ್ದು ಬೀದಿ ಆವರಿಸಿತು

ಹೊರಗೆ ಮೌನದ ಫರದೆ ಕಟ್ಟಿಕೊಂಡೆ ಒಳಗಿನ ಸಂತೆ ನೆರೆಯುತಿದೆ

ಗಾಯದ ಪಾದದ ಮೇಲೂ ನಿರಾಕರಿಸಿದುಸಿರಿನಲ್ಲೇ ಮೋಹಗೊಳ್ಳುವ ಪಾತ್ರದ ನೆರಳು

ಬೆಂಕಿ ಇಡುವಾಗ ಆ ಮನಸು ಏನಂದುಕೊಂಡಿತ್ತೊ

ಕೊನೆಗೂ ಪಾದಕ್ಕಂಟಿದ ಬೂದಿ ಅರಿವಿಗೆ ಬರುವುದು

ಈ ಸಂಜೆಯಲಿ ಏನು ಮಾತು

ಆಗಷ್ಟೇ ಹುಟ್ಟಿದ ಚಂದ್ರ ಈಗ ಇಲ್ಲವಾದನು

ಹಗಲ ಹುಡುಗಿ ಬಿಡಿಸಿದ ಚಿತ್ರ ಖಾಲಿ ಇತ್ತು

ಕಪ್ಪು ಬಣ್ಣ ತುಂಬಲು ಇರುಳ ಹುಡುಗಿಗೆ ಅವಕಾಶ ದೊರೆಯಿತು

ನನ್ನ ಬದುಕಿಸುವುದು ರೊಟ್ಟಿಯೇ ಎನಿಸಿತ್ತು

ನಿನ್ನ ಸಂಧಿಸುವ ತನಕ…

 ]]>

‍ಲೇಖಕರು G

4 September, 2012

1 Comment

  1. ಹಿಪ್ಪರಗಿ ಸಿದ್ದರಾಮ್

    ಚೆನ್ನಾಗಿದೆ ಸರ್, ಅಭಿನಂಧನೆಗಳು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading