ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಾರಿ ಬಿದ್ದಿದ್ದು ಯಾವ ದಿಕ್ಕಿಗಿ ಹೇಳು ಖರೆ!

ರಮೇಶ ಆರೋಲಿ

ನದಿತೀರ

ಹನಿ ಮುಡ್ಯಾವ ಖರೆ
ದನಿ ಕಾಡ್ಯಾವ ಖರೆ
ಆದ್ರ… ಈ ನಗಿಡ್ಯಾಗ ನೆಪ್ಪಾಗೊ
ಆ ಹಾಡು ಯಾರದು ಹೇಳು ಖರೆ!

ಹೂವು ದಿನಾ ಬಿಡ್ತಾವ ಖರೆ
ನೋಡೋರ ಕೈಮಾಡಿ ಕರಿತಾವ ಖರೆ
ಆದ್ರ… ಜಡಿಗೆ ಮುಡಿದಿದ್ದು
ಯಾರ ಹೆಸರಲೆ ಹೇಳು ಖರೆ!

ಹಕ್ಕಿ ತೆಲ್ಯಾವ ಖರೆ
ಮತ್ತ ಗೂಡಿಗೆ ಹೊಂಟಾವ ಖರೆ
ಆದ್ರ… ಎದಿವಳಗ ಬಚ್ಚಿಟ್ಟ
ಗುಟ್ಟು ಯಾರದು ಹೇಳು ಖರೆ !

ನೆನಪು ಬರ್ತಾವ ಖರೆ
ನಗು ಬರ್ಸ್ತಾವ ಖರೆ
ಆದ್ರ…ಜೀವ ಹಿಂಡಿದ್ದು
ಯಾರು ಹೇಳು ಖರೆ!

ದು:ಖ ಆಗ್ತಾದ ಖರೆ
ಅಳು ಉಕ್ಕಿ ಬರ್ತಾದ ಖರೆ
ಆದ್ರ…ಕಣ್ಣಾಗ ನಿಂತಾವ
ಚೆಲುವ ಯಾರು ಹೇಳು ಖರೆ!

ಕನಸು ಬಿಳ್ತಾವ ಖರೆ
ಎಲ್ಲೆಲ್ಲೊ ಹೊಯ್ತಾವ ಖರೆ
ಆದ್ರ… ನೀ ಕುಂತಿದ್ದು
ಯಾರ ಕುದರೆ ಮ್ಯಾಲ ಹೇಳು ಖರೆ!

ಚುಕ್ಕಿ ಹೊಳ್ದಾವ ಖರೆ
ಬೆಳಕ ತಳ್ದಾವ ಖರೆ
ಆದ್ರ…ನೀ ಜಾರಿ ಬಿದ್ದಿದ್ದು
ಯಾವ ದಿಕ್ಕಿಗಿ ಹೇಳು ಖರೆ!

‍ಲೇಖಕರು avadhi

28 July, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

2 Comments

  1. Dhananjaya

    ಇಂಥಾ ಕವನ ಬರೀ ಅಂತ ನಿನ್ನನ್ನ ಕಾಡಿದ್ದು ಯಾರು ಹೇಳು ಖರೆ!!!

  2. Vithal Dalawai

    Very nice ramesh

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading