ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿತ್ತು ಹೋದ ಒಂದು ಎಳೆ..

ಪುರಾವೆ

ಸ್ಮಿತಾ ಅಮೃತರಾಜ್ ಸಂಪಾಜೆ

ಸಾಬೀತು ಪಡಿಸಲು
ಸೂಜಿ ಕಣ್ಣಿನಿಂದ ಹುಡುಕಿದರೂ
ಕಿತ್ತು ಹೋದ ಒಂದು ಎಳೆ
ನೂಲಿನ ನೇಯ್ಗೆಗೆ ಪುರಾವೆಗಳೇ
ಸಿಗುತ್ತಿಲ್ಲ.

quilt1ಎದೆಯ ತಳದಲ್ಲಿ ಸೋಸಿ
ಉಳಿದ ಅಪ್ಪಟ ತಿಳಿ ಸತ್ಯವೊಂದು
ಅಗೋಚರವಾಗಿ ಕದಡಿ ಪ್ರತಿಬಿಂಬ
ಮಸುಕು ಮಸುಕಾದುದ್ದಕ್ಕೆ ಪುರಾವೆಯ
ಕಡತಗಳನ್ನು ಹೇಗೆ ಶೋಧಿಸುವುದು?
ಬೆಳ್ಳಗೆ ಹೊಳೆದದ್ದು
ಕನ್ನಡಿಯಂತೆ ಪ್ರತಿಫಲಿಸಿದ್ದು
ಹಗಲಿನಷ್ಟು ನಿಚ್ಚಳವಾಗಿ ತೋರಿದ್ದು
ಎಲ್ಲವೂ ಕನಸಿನಂತೆ ಕರಗಿರುವಾಗ
ಅರ್ಥವಿರದ ಪುರಾವೆ ಒದಗಿಸುವುದು
ವೃಥಾ ಶ್ರಮವಷ್ಟೆ.

ಕಣ್ಣ ರೆಪ್ಪೆಯೊಳಗೆ ಅಚ್ಚೊತ್ತಿ ನಿಂತ
ಸ್ಪಷ್ಟ ಬಿಂಬವೊಂದನ್ನು ಆಕಾರವೇ ಇಲ್ಲವೆಂದು
ಅಳಿಸಲು ಸಾಧ್ಯವೇ?.

ಪದ್ಯ ಹೊಸೆದು
ರಾಗ ಕಟ್ಟಿ ತೇಲಿ ಬಂದ
ಗಾನ ಗಾಯನದ ಇಂಪು
ಕವಿತೆ ಹುಟ್ಟಿದ ಕ್ಷಣಗಳಿಗೆ
ಕಾಡಿದ ಭಾವವಷ್ಟೇ ಸಾಕ್ಷಿ.

ಸಾಕ್ಷಿಯುಳಿಸದೇ
ಹಕ್ಕಿ ಹಾರಿದ್ದು
ಹೂವು ನಕ್ಕಿದ್ದು
ಗಾಳಿಗಷ್ಟೇ ತಿಳಿದ ಸತ್ಯ
ಸಾಬೀತು ಪಡಿಸುವುದಕ್ಕೆ
ಪುರಾವೆ ಒದಗಿಸುವುದು
ಎಷ್ಟು ಕಷ್ಟ?!

‍ಲೇಖಕರು Admin

6 November, 2016

1 Comment

  1. mm shaik

    oLLeya kavite..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading