ಸಿದ್ದು ಪಿನಾಕಿ
‘ಸ್ವರ್ಗಕ್ಕೆ ಬನ್ನಿ’ ಅಂತ ಡಾ. ಮೋಹನ್ ಕುಮಾರ್ ಅವರು ಕರೆ ಮಾಡಿದಾಗ ಆಶ್ಚರ್ಯವಾಯಿತು. ಸರಿ, ಸ್ವರ್ಗ ಹೇಗೆ ಇರುತ್ತದೋ ನೋಡೇ ಬಿಡೋಣ ಎಂದುಕೊಂಡು ಕಾಡು, ಕಣಿವೆ, ಬೆಟ್ಟ, ಗುಡ್ಡ ಏರುತ್ತಾ, ಇಳಿಯುತ್ತಾ ತಲುಪಿದ್ದು ಸ್ವರ್ಗವನ್ನು.
ಅದು ನಿಜಕ್ಕೂ ಸ್ವರ್ಗವೇ ಕಣ್ರೀ. ಆ ಸ್ವರ್ಗದ ಬಾಗಿಲನ್ನು ದಾಟಿ ಒಳ ಹೋಗುತ್ತಿದ್ದಂತೇ, ಸ್ವರ್ಗದಲ್ಲೂ ನರಕ ಇದೆ ಎಂಬುದು ಗೊತ್ತಾಯ್ತು.
ಓದುತ್ತಾ ಹೋದಂತೆ, ಸ್ವರ್ಗದಲ್ಲಿನ ಜನರಿಗೂ ನರಕದ ಹಾದಿ ತೋರಿಸಿದ್ದವರ ಮೇಲೆ, ಮೇಲಿಂದ ಕೆಳಗೆ ಉರಿದುಹೋಯ್ತು. ಸ್ವರ್ಗದೊಳಗಿನ ನರಕದ ಬಗ್ಗೆ ಖ್ಯಾತ ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಅವರು ಇಂಚಿಂಚೂ ಬಿಡಿಸಿಟ್ಟಿದ್ದಾರೆ.
ಮೊನ್ನೆಯಷ್ಟೇ, ಜಿ.ಎನ್.ಮೋಹನ್ ಅವರ ಈ ನಿಟ್ಟುಸಿರ ಬರಹಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.
ಜಿ.ಎನ್.ಮೋಹನ್ ಅವರ ಈ ` ಕಾಫಿ ಕಪ್ ನೊಳಗೆ ಕೊಲಂಬಸ್ ‘ ನಲ್ಲಿ ಕೊಲಂಬಸ್ ಅಷ್ಟೇ ಇಲ್ಲ. ಸ್ವರ್ಗದೊಳಗಿನ ನರಕ ದರ್ಶನವಿದೆ. ಓದಿ. ಆಗ ತಿಳಿಯುತ್ತೆ, ಸ್ವರ್ಗದೊಳಗಿನ ಜನರ ನರಕ ಯಾತನೆ.
ಪುಸ್ತಕಕ್ಕಾಗಿ-
https://www.sumshowdone.com/home/21929–g-n-mohan-p-sainath-jugalbandi.html
ಕಾಫಿ ಕಪ್ ನೊಳಗೆ ಕೊಲಂಬಸ್ ‘ ನಲ್ಲಿ ಕೊಲಂಬಸ್ ಅಷ್ಟೇ ಇಲ್ಲ. ಸ್ವರ್ಗದೊಳಗಿನ ನರಕ ದರ್ಶನವಿದೆ. odalebeku.. viralviallad sarala barahakke tumba mecchuge..