ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕವಿತೆ ಎಂದರೆ…’ – ವಿದ್ಯಾಶಂಕರ್ ಬರೀತಾರೆ

ಕವಿತೆಯಂದರೆ ಏನು? ಏನಲ್ಲ?

ವಿದ್ಯಾಶಂಕರ ಹರಪನಹಳ್ಳಿ

 
~೧~
ಕವಿತೆ ನಿನ್ನೆದೆಯ
ತಿವಿಯುವ ಆತ್ಮಸಾಕ್ಷಿ
ನಿನ್ನನರಿಯಲು
~
ಕವಿತೆ ಪುಟ್ಟಹಣತೆ
ಯಾರು ಹಿಡಿಯದ ದಾರಿ
ನಡೆವವಗೆ
~
ಕವಿತೆ ಒಂದು ಸಾಕ್ಷಿ
ಯಾರು ನಂಬದ ನಿಜವ
ನುಡಿದವಗೆ
~

ಕವಿತೆ ಜೊತೆಗಾತಿ
ತಣ್ಣಗೆ ಎಕಾಂತದಿ
ಸಂಭ್ರಮಿಸುವಗೆ
~
ಕವಿತೆ ಕಣ್ಣೀರು
ದುಃಖದಿ ಸ್ತಬ್ಧಗೊಂಡು
ಅವುಡುಗಚ್ಚಿದವಗೆ
~
ಕವಿತೆ ಮುಗಳ್ನಗೆ
ವಿನಾಕಾರಣ ಪ್ರೀತಿಸಿ
ಏನೂ ಬೇಡದವಗೆ
~
ಕವಿತೆ ಸೂಕ್ಷ್ಮ ಸದ್ದು
ಎದೆಬಿರಿದು ಕಿವುಡಾದ
ಸ್ತಬ್ಧ ಗಳಿಗೆ
~
ಕವಿತೆ ಒಂದು ಬೆಸುಗೆ
ಅನಾಮಿಕ ನಾನು ನೀನು
ಮಿಡಿದ ದಿವ್ಯ ಗಳಿಗೆ
~
ಕವಿತೆ ಮಾತು
ಅವನು ಅವಳು ಮೌನ
ಅವಿರ್ಭವಿಸಿದ ಗಳಿಗೆ
~
ಕವಿತೆ ಸಂವಹನ
ಸಂಕೋಚದ ಪ್ರೇಮಿಯ
ಮೂಗರ್ಜಿ

~೨~
ಕವಿತೆ ಆಯುಧವಲ್ಲ
ಹಿಡಿದು ಹೊಡೆದಾಡಲು,
ಗಾಯಮಾಡಲು…
~
ಕವಿತೆ ಜಪಮಣಿಯಲ್ಲ
ಬಿಡಿಬಿಡಿ ಎಣಿಸಲು,
ಪಿಟಿಪಿಟಿ ಓದಲು…
~
ಕವಿತೆ ವಾಹನವಲ್ಲ
ಕುಳಿತು ಪರಾರಿಯಾಗಲು
ಮುಜುಗರದಿಂದ…
~
ಕವಿತೆ ಗುರಾಣಿಯಲ್ಲ
ಅದರ ಹಿಂದೆ ಅವಿತು
ಬಚಾವಾಗಲು…
 
 

‍ಲೇಖಕರು G

7 November, 2013

4 Comments

  1. bharathi b v

    Sikkapatte ishta aaythu

  2. nagraj.harapanahalli

    ಕವಿತೆ ತಣ್ಣಗೆ ಸುಳಿವ
    ಒಲವ ತಂಗಾಳಿ ಕೂಡಾ…..

  3. sindhu

    ಚೆನಾಗಿದೆ. ಇಷ್ಟ ಆಯ್ತು.
    ಈ ಬಗ್ಗೆ ಕೆ.ಎಸ್.ನ ನೋಟಸಾಲು ಹೀಗಿದೆ..
    ಮೂಲವರು ಬದುಕು;
    ಉತ್ಸವಮೂರ್ತಿ ಕವಿತೆ.
    ………………………………..
    ಕಂಬನಿ ಬದುಕು;
    ಕರವಸ್ತ್ರ ಕವಿತೆ!

  4. mmshaik

    nice..very nice..!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading