ಪ್ರೀತಿ ನಾಗರಾಜ್
ನನ್ನ ಕೆಲಸದ ಯಜಮಾನ್ತಿಯ ಮೊನ್ನಿನ ಸಂದರ್ಭದ ಜ್ಞಾನೋದಯ.
“ಅಕ್ಕಾ ಬ್ರಾಂಬ್ರು ಮಡೀಲಿ ಅಡಿಗೆ ಮಾಡ್ತರಲ್ಲಕ್ಕಾ ಅವ್ರಾದ್ರೂ ಸ್ವಲ್ಪ ಎಚ್ಚು ಕಮ್ಮಿ ಆದ್ರ ಅರ್ಜಸ್ಟ್ (Adjust) ಮಾಡ್ಕತ್ತರ. ಒಂದೊಂದು ಪೂಜೆ ಟೇಮಲಿ ಈ ನಿಂಗ್ಯತ್ರು (ಲಿಂಗಾಯತರು) ಗೌಡ್ರ ಕೇಳಂಗಿಲ. ಅಯ್ಯ ಅದೇನ್ ಪೂಜೆ, ಅದೇನ್ ಮಡಿ. ಗೌಡ್ರು ಮನೇಲಿ ಮಾವ್ಸ (ಮಾಂಸ) ಮಾಡಕ ಬ್ಯಾರೆ ಪಾತ್ರ (ಪಾತ್ರೆ) ಇಕ್ಕತರ. ತಂದು ಉಣ್ಣದು ಮತ್ತೆ ಮನೆ ಒಳಿಕೆಯ. ಅದಕ್ಕ ಅಂತಾ ಸಾಸ್ತ್ರ ಬ್ಯಾರೆ!…”
”…ನೀವೇನೇ ಏಳಿ, ಬ್ರಾಂಬ್ರು ಸಾಸ್ತ್ರ ಬುಟ್ರೂ ಈಗ ಲಿಂಗಾತ್ರು ಗೌಡ್ರು ಬುಡಿಕಿಲ. ಮೊನ್ನೆ ಕೊಡುಗ್ನೋರು (ಕೊಡಗಿನವರು) ಒಬ್ರು ಸತ್ತ್ನಾರಾಯ್ಣ (ಸತ್ಯನಾರಾಯಣ) ಪೂಜೆ ಮಾಡ್ಸವರ. ಊಟುಕ್ಕೆ ಬೆಳ್ಳುಳ್ಳಿ ಈರುಳ್ಳಿ ಸೈತ ಆಕ್ನಿಲ್ಲವಂತೆ. ಆ ಮನೆ ಅಜ್ಜಿ ಯೋಳ್ತಿತ್ತು. ಅವ್ರು ಅಂದಿ (ಹಂದಿ) ಮಾವ್ಸದ್ ಪಲ್ಯನೇ ತಿನ್ನದಂತೆ ಮೇನು (main) ಅದ್ನೇ ಮಾಡದ ಬುಟ್ ಬಿಟ್ಟರ. ನಮ್ ದೇವ್ರಿಗೆ ಕ್ವಾಪ ಬತ್ತದ ಅಂತ ಅಜ್ಜಿ ವಸ್ಸಿ ಬ್ಯಾಸ್ರ ಮಾಡ್ಕಂದಿರ್ನಿಲ್ಲ ಬುಡಿ…ಇಂಗ್ಯಾಕಗ್ಯರೋ ಎಲ್ರೂ…ತಂ ತಮ್ದ ಮಾಡದ ಬುಟ್ಟಿ ಎಲ್ಲಾರ್ದೂ ಎಲ್ಲಾರೂ ಮಾಡಕೋಯ್ತರ…ಅಂಗ್ ಮಾಡಿ ಯಾರೂ ಯಾರದ್ನೂ ಮಾಡಿಕಿಲ. ಎಲ್ಲಾ ಚಿತ್ರಾನ್ನ ಆಗೋಯ್ತದ”
0 ಪ್ರತಿಕ್ರಿಯೆಗಳು