
ರಾಘವೇಂದ್ರ ಹೆಗಡೇಕರ್
ಅಣ್ಣಾ ಅದು ಹೀಗಾಯಿತಣ್ಣ
ಬೆಳಿಗ್ಗೆಯಿಂದಲೇ
ಎರಡು ಕಾಲು ಸೇರಿಸಿ
ಗಟ್ಟಿಯಾಗಿ ಕಟ್ಟಿದ್ದರು
ಪಾದಗಳಿಗೆ ರಕ್ತ ತಲುಪದೇ
ಅದು ತಣ್ಣಗಾಗಿತ್ತು
ಅದಕ್ಕೆ ಮುಂಚೆ
ನಿನ್ನೆ ರಾತ್ರಿಯೆ ಬೇಗನೆ
ಹಿಡಿದು ಬುಟ್ಟಿಯಲ್ಲಿ
ಕತ್ತಲಲ್ಲಿ ಬಚ್ಚಿಟ್ಟಿದ್ದರು.
ರಾತ್ರಿಯಿಡಿ ಕಾಳು
ನೀರಿಲ್ಲದೆ ಉಪವಾಸ
ಬರಿ ನೀರು ನೀರು
ಹೊರಗೆ ಹೊರಬಂತು
ಆಮೇಲೆ ಎರಡು ರೆಕ್ಕೆಯನ್ನು
ಮೇಲಕ್ಕೇರಿಸಿ
ಕತ್ತರಿ ಕುಣಿಕೆ ಹಾಕಿ
ತೂಗು ಬಿಟ್ಟಿದ್ದರು .
ಹತ್ತಾರು ಹರ ದಾರಿ
ದೂರ ಮೈಲಿ ಗಾಳಿಯಲ್ಲಿ
ತೇಲಿಸಿಕೊಂಡು ಹೋಗಿ
ನಮ್ಮಂತೆ ಬಿದ್ದಿದ್ದ ನೂರಾರು
ಅಮಾಯಕಂಗಳ ಜತೆ
ನಿತ್ರಾಣವಾಗಿ ಎಸೆದರು,
ಓಹೋ ಇದು ಯಾವುದೋ
ಊರ ಜಾತ್ರೆ ಗದ್ದುಗೆ
ನನ್ನಂತೆ ಬಣ್ಣ ಬಣ್ಣದ
ಗರಿತುಪ್ಪಳಗಳನ್ನೇ ಹೊದ್ದ
ಮನ ಮೋಹಕ ರಥ
ನಮ್ಮವರ ಬಿಸಿಯುಸಿರು
ಭೂಮಿ ಬೆಂಕಿಯ ಕಾವಲಿ
ಮೇಲಿಂದ ರಣ ಬಿಸಿಲು
ಪಾಳಿ ಬಂದ ಕೂಡಲೇ
ನನ್ನ ಎಳೆ ಕತ್ತು ಮುರಿದರೋ
ಇಲ್ಲ ಕೊಯ್ದರೋ
ಗೊತ್ತಾಗಲಿಲ್ಲ
ಒದ್ದಾಡಲು ತ್ರಾಣವಿರಲಿಲ್ಲ
ನಿಧಾನವಾಗಿ ಜೀವನದಲ್ಲಿ
ಮೊದಲು ಸಾರಿ ನಾನು
ತಲೆಯಿಲ್ಲದೆ ನಿದ್ದೆಗೆ ಜಾರಿದೆ .





ಛೆ ಈ ಮೂಕ ಪ್ರಾಣಿಗಳಿಗೆ ಎಂಥಾ ಗತಿ!