ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಬಿಕಾ ಇಡೂರು ಕವಿತೆ- ಬಣ್ಣಗಳ ನಡುವಿನಲ್ಲಿ…

ಅಂಬಿಕಾ ಇಡೂರು

ಬಣ್ಣ ಬಣ್ಣವೆಂದು ಬಡಿದುಕೊಳ್ಳುವುದು ಬೇಡ
ನಾಳೆ ಹೋಗುವುದು ಎಲ್ಲರೂ ಒಂದೇ ಮಣ್ಣಿಗೆ
ಅಜ್ಜ ನೆಟ್ಟ ಆಲದ ಮರವೆಂದು ಜೋತು ಬೀಳುವುದೇಕೆ
ಕಾಣುವ ಕಣ್ಣಿದ್ದರೆ ಇಲ್ಲಿ ಇನ್ನೂ ಸುಂದರ ಮರಗಳಿವೆ…

ಕಾಲವಿನ್ನೂ ಮಿಂಚಿಹೋಗಿಲ್ಲ,
ಬದಲಾಗಬೇಕಿದೆ, ತೊಳೆದು ಹಾಕಬೇಕಿದೆ
ಮನಕ್ಕಂಟಿದ ಕಲ್ಮಶದ ಬಣ್ಣವನು…

ಆಗ ಕಾಣಬಹುದೇನೋ ಶುದ್ಧಾನುಶುದ್ಧ ಬಣ್ಣವೊಂದು
ಆಗ ಹಬ್ಬಬಹುದೇನೋ ಸಮಾನತೆಯ ಬಳ್ಳಿಯೊಂದು…
ಹಂಚಿ ಹೋಗಬಾರದೇಕೆ ನಾವು ಈ ಪ್ರೀತಿಯ ಬಳ್ಳಿಯನ್ನು,
ನಿಮ್ಮ ಮತ್ತು ನಮ್ಮ ಮುಂದಿನ ಮುಗ್ಧ ಪೀಳಿಗೆಗಾಗಿ…

‍ಲೇಖಕರು Admin

11 October, 2022

1 Comment

  1. Sowmya Palimar

    Tumba chennagide…
    Munduvarisi…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading