ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾ ಕವಿತಾ ಲೇಖನಗಳು

ತೊಮಸ್ ತ್ರಾನ್ಸ್ತ್ರೋಮರ್ರವರ ಇನ್ನಷ್ಟು ಪದ್ಯಗಳು..

ತೊಮಸ್ ತ್ರಾನ್ಸ್ತ್ರೋಮರ್ರವರ ಇನ್ನಷ್ಟು ಪದ್ಯಗಳು..

-ಡಾ.ಜೆ.ಬಾಲಕೃಷ್ಣ ಅಂತರಗಂಗೆ ಯಿಂದ ಅನುವಾದದಿಂದ ದೊರಕುವುದೇ ಕಾವ್ಯ ಎಂದು ಒಬ್ಬ ಕಾವ್ಯ ವಿಮರ್ಶಕ ತೊಮಸ್ ತ್ರಾನ್ಸ್ತ್ರೋಮರ್‌ರವರ ಕಾವ್ಯದ ಬಗ್ಗೆ ಹೇಳುತ್ತಾ ಬರೆದಿದ್ದಾನೆ. ಇಲ್ಲಿ ಅನುವಾದವೆಂದರೆ,  ಕವಿ ನಿಶ್ಶಬ್ದದಿಂದ ತನ್ನ  ಸಂವೇದನೆಗಳಿಗೆ ಸೂಕ್ತ`ಶಬ್ದ’ವನ್ನರಸಿ ಅವ್ಯಕ್ತದಿಂದ ವ್ಯಕ್ತಕ್ಕೆ ಅದನ್ನು ಅನುವಾದಿಸುವುದು ಎಂದರ್ಥ.ತೊಮಸ್ ಸ್ವೀಡನ್ನಿನ ಅತ್ಯಂತ ಜನಪ್ರಿಯ ಕವಿ. 2011ರ ಸಾಹಿತ್ಯ ನೋಬೆಲ್ಪಾರಿತೋಷಕ  ಆ ಕವಿಗೆ ದೊರಕಿದೆ. ಸ್ವೀಡನ್ನಿಗೆ 36 ವರ್ಷಗಳ ನಂತರನೋಬೆಲ್ ಪಾರಿತೋಷಕ ದೊರೆತಿದೆ. ಆದರೆ ಹಲವಾರು ವಿಮರ್ಶಕರ ಪ್ರಕಾರಈ ಬಹುಮಾನ ತೊಮಸ್‌ಗೆ ಈ ಮೊದಲೇ ದೊರಕಬೇಕಿತ್ತು. ಪ್ರತಿ ವರ್ಷಸಾಹಿತ್ಯದ ನೋಬೆಲ್ ಬಹುಮಾನ ಪ್ರಕಟಿಸುವ ಸಮಯಕ್ಕೆ ಅದು ತೊಮಸ್‌ಗೇದೊರಕುತ್ತದೆ ಎಂದು ಪತ್ರಕರ್ತರು ತೊಮಸ್ ಮನೆಯ ಎದುರುಕಾದಿರುತ್ತಿದ್ದರಂತೆ. ಚಿಲಿಯಲ್ಲಿ ಪ್ಯಾಬ್ಲೊ ನೆರುಡಾ ಮನೆಮಾತಾಗಿದ್ದಂತೆ ತೊಮಸ್ ಸ್ವೀಡನ್ನಿನಲ್ಲಿಮನೆಮಾತಾಗಿದ್ದಾನೆ. ನೆರುಡಾ ಸಾಮಾಜಿಕ ಮತ್ತು ಧಾರ್ಮಿಕ ಚೌಕಟ್ಟುಗಳನ್ನುಧಿಕ್ಕರಿಸಿದರೆ, ತೊಮಸ್ ಆಧ್ಯಾತ್ಮ ಮತ್ತು ಪ್ರಕೃತಿಯಲ್ಲಿ ಆಸರೆ ಪಡೆದಾತ.ಭಾಷೆಯನ್ನೇ ಒಂದು ಮೆಟಫರ್ ಆಗಿ ಬಳಸುವ ಕವಿ ತೊಮಸ್. ಆತನಿಶ್ಶಬ್ದದಲ್ಲಿ ಶಬ್ದಗಳನ್ನು ಹೆಕ್ಕಿ ತೆಗೆಯುವ ಕವಿ. `ಭಾಷೆ ವಧಿಸುವವರೊಂದಿಗೆಹೆಜ್ಜೆ ಹಾಕಿ ನಡೆಯುತ್ತಿರುತ್ತದೆ. ಹಾಗಾಗಿ ನಾವು ಹೊಸ ಭಾಷೆಕಂಡುಕೊಳ್ಳಬೇಕು’ ಎನ್ನುತ್ತಾನೆ ತೊಮಸ್. ಪದಗಳ ಹೊರೆ ಹೊತ್ತವರು ಹೇಸಿಗೆ ತರಿಸುತ್ತಾರೆ, ಬರೇ ಪದಗಳು – ಭಾಷೆಯೇ ಇಲ್ಲ. ಹಿಮಾಚ್ಛಾದಿತ ದ್ವೀಪದೆಡೆಗೆ ನನ್ನ ಪಯಣ ಮುಂದುವರಿಸುತ್ತೇನೆ. ದಟ್ಟಾರಣ್ಯಕ್ಕೆ ಪದಗಳೇ ಇಲ್ಲ. ಖಾಲಿ ಖಾಲಿ ಪುಟಗಳು ಎಲ್ಲ ದಿಕ್ಕಿಗೂ ಹರಡಿವೆ. ಹಿಮದಲ್ಲಿ ಜಿಂಕೆಯ ಹೆಜ್ಜೆಯ ಗುರುತು: ಅದೊಂದು ಭಾಷೆ, ಪದಗಳೇ ಇಲ್ಲದ ಭಾಷೆ. (ಫ್ರಂ ಮಾರ್ಚ್ 1979 ಪದ್ಯದಿಂದ) ತೊಮಸ್ ‌ರವರ ಬಹುಕಾಲದ ಗೆಳೆಯ ಮತ್ತು ಆತನ ಪದ್ಯಗಳನ್ನು ಇಂಗ್ಲಿಷಿಗೆಅನುವಾದಿಸಿರುವ ರಾಬಿನ್ ಫುಲ್ಟನ್ ತೋಮಸ್ ಮತ್ತು ಆತನ ಕಾವ್ಯದ ಬಗ್ಗೆಈ ರೀತಿ ಹೇಳಿದ್ದಾನೆ: `ಕೆಲವೊಂದು ಕವಿಗಳು ಭಾಷೆಯನ್ನು ಅದೆಷ್ಟು ದಟ್ಟವಾಗಿಬಳಸುತ್ತಾರೆಂದರೆ, ಅವುಗಳನ್ನು ಅನುವಾದಿಸಲು ಆಸ್ಪದವೇ ಇರುವುದಿಲ್ಲ.ತ್ರಾನ್ಸ್ತ್ರೋಮರ್ ಸಹ ಅದೇ ರೀತಿಯ ಕವಿ. ಆತ ಹಲವಾರು ರೀತಿಗಳಲ್ಲಿಸಾಪೇಕ್ಷವಾಗಿ ಸಾಹಸಿಕೆಯಿಲ್ಲದ ಮತ್ತು ಸರಳವಾಗಿರುವ ಭಾಷೆ ಬಳಸುತ್ತಾನೆಹಾಗೂ ಓದುಗರಿಗೆ ವಿಶಿಷ್ಟ ಪ್ರತಿಮೆಗಳನ್ನು ನೀಡುತ್ತಾನೆ. ಆ ಪ್ರತಿಮೆಗಳುಓದುಗರಿಗೆ ಅಚ್ಚರಿ ಮೂಡಿಸುವುದರ ಜೊತೆಗೆ ಶಾಕ್ ಸಹ ನೀಡುತ್ತವೆ. ಕವಿಮಾಡಬೇಕಾದುದು ಅದನ್ನೇ.’ ತೊಮಸ್ ತನ್ನ ಪದ್ಯಗಳನ್ನು `ಭೇಟಿಯತಾಣಗಳು’ ಎಂದು ಕರೆದಿದ್ದಾನೆ. ಆತನ ಪ್ರಕಾರ ಅಲ್ಲಿ ಕತ್ತಲು ಮತ್ತು ಬೆಳಕು,ಅಂತರಂಗ ಮತ್ತು ಬಹಿರಂಗ ಪರಸ್ಪರ ಘರ್ಷಿಸಿ ಜಗತ್ತಿನೊಂದಿಗೆ,ಚರಿತ್ರೆಯೊಂದಿಗೆ ಅಥವಾ ನಮ್ಮೊಂದಿಗೇ ಒಂದು ಆ ಕ್ಷಣವೇ ರೂಪುಗೊಳ್ಳುವಹೊಸ ಸಂಪರ್ಕವೊಂದನ್ನು ಉಂಟುಮಾಡುತ್ತದೆ. ಎಂಭತ್ತು ವರ್ಷದ ತೊಮಸ್ ‌ರವರ ಹದಿನೈದು ಕವನ ಕೃತಿಗಳು ಅರವತ್ತಕ್ಕೂಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ. ಅವುಗಳನ್ನು ಮಲಯಾಳಂಗೆಕೆ.ಸಚ್ಚಿದಾನಂದನ್ ಅನುವಾದಿಸಿದ್ದಾರೆ. 1984ರಲ್ಲಿ ಭೋಪಾಲ್ ಗ್ಯಾಸ್ದುರಂತದ ನಂತರ ಭೋಪಾಲ್ ಗೆ ತೊಮಸ್ ಭೇಟಿ ನೀಡಿದ್ದರು ಹಾಗೂಸಚ್ಚಿದಾನಂದನ್ ‌ರವರ ಜೊತೆಯಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಎದುರು ದುರಂತದಲ್ಲಿ ಮಡಿದವರ ಸಾಂತ್ವನಕ್ಕಾಗಿ ಕಾವ್ಯ ವಾಚನಮಾಡಿದ್ದರೆಂದು ಸಚ್ಚಿದಾನಂದನ್ ‌ರವರೇ ಹೇಳಿದ್ದಾರೆ. ತೊಮಸ್ ಗಾಸ್ಟ ತ್ರಾನ್ಸ್ತ್ರೋಮರ್ ಹುಟ್ಟಿದ್ದು 1931ರ ಏಪ್ರಿಲ್ 15ರಂದು. ತನ್ನತಂದೆ ವಿಚ್ಛೇದನದಿಂದ ದೂರವಾದ ನಂತರ ಶಾಲಾ ಅಧ್ಯಾಪಕಿತಾಯಿಯೊಂದಿಗೆ ಬೆಳೆದ. ಸ್ಟಾಕ್ಹೋಮ್ ‌ನಲ್ಲಿನ ತನ್ನ ಶಾಲಾ ದಿನಗಳಲ್ಲಿಯೇ ಆತಪದ್ಯ ಬರೆಯಲು ಆರಂಭಿಸಿದ. ತನ್ನ ಇಪ್ಪತ್ತಮೂರನೇ ವಯಸ್ಸಿನಲ್ಲಿಯೇ ತನ್ನಮೊಟ್ಟ ಮೊದಲ ಕವನ ಸಂಕಲನ `ಹದಿನೇಳು ಪದ್ಯಗಳು’ ಪ್ರಕಟಿಸಿದ. 1956ರಲ್ಲಿಸ್ಟಾಕ್ಹೋಮ್ ವಿಶ್ವವಿದ್ಯಾನಿಲಯದಲ್ಲಿ ಮನಶಾಸ್ತ್ರದಲ್ಲಿ ಪದವಿಯನ್ನು ಪಡೆದುಕೆಲವರ್ಷಗಳು ಬಾಲಾಪರಾಧಿಗಳ ಕೇಂದ್ರದಲ್ಲಿ ಆ ಮಕ್ಕಳು ಸಮಾಜದಲ್ಲಿಉತ್ತಮ ಪ್ರಜೆಗಳಾಗಲು ಮನಶಾಸ್ತ್ರಜ್ಞನಾಗಿ ಕಾರ್ಯನಿರ್ವಹಿಸಿದ. ಆತಮನಶಾಸ್ತ್ರಜ್ಞನಾಗಿದ್ದುದು ಮನುಕುಲದ ಮನಸ್ಸಿನ ಜಾಲಾಟವನ್ನು ತನ್ನಕಾವ್ಯದಲ್ಲಿ ವ್ಯಕ್ತಗೊಳಿಸಲು ಸಾಧ್ಯವಾಗಿರಬಹುದು. 1990ರಲ್ಲಿ ಪಾರ್ಶ್ವವಾಯುವಿಗೆಬಲಿಯಾದ ಆತ ಹೆಚ್ಚು ಓಡಾಡದಾದ ಹಾಗೂ ಮಾತು ಸಹ ನಿಂತುಹೋಯಿತು.ಆದರೆ ಆತ ತನ್ನ ಕಾವ್ಯರಚನೆಯನ್ನು ಮುಂದುವರಿಸಿದ. ಆತನ ಇತ್ತೀಚಿನಕೃತಿಯೆಂದರೆ 2004ರಲ್ಲಿ ಪ್ರಕಟವಾದ `ದ ಗ್ರೇಟ್ ಎನಿಗ್ಮಾ’. ಕಾವ್ಯದ ರಚನೆಯಜೊತೆಗೆ ಆತ ಪಿಯಾನೊ ವಾದಕ ಸಹ. ಪಾಶ್ರ್ವವಾಯುವಿಗೆ ಬಲಿಯಾಗಿದ್ದರೂಒಂದೇ ಕೈಯಲ್ಲಿ ಈಗಲೂ ಪಿಯಾನೊ ನುಡಿಸುತ್ತಾನೆ. ನೋಬೆಲ್ ಬಹುಮಾನಸೇರಿದಂತೆ 1966ರಿಂದ ತೊಮಸ್ಗೆ ಒಂಭತ್ತು ರಾಷ್ಟ್ರೀಯ ಮತ್ತುಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. […]

read more
ನರೇಶ್ ಮಯ್ಯ ಕವಿತೆ: ಸೆಲೆಸುಟ್ಟ ಸಂಗಾತ

ನರೇಶ್ ಮಯ್ಯ ಕವಿತೆ: ಸೆಲೆಸುಟ್ಟ ಸಂಗಾತ

-ನರೇಶ್ ಮಯ್ಯ ಸೆಲೆಸುಟ್ಟರೂ ಬಿಡಲಿಲ್ಲ ಭ್ರಾಂತ ಭೂಯಿಷ್ಟ ಬ್ರಹ್ಮಾಂಡ, ನೆಲೆಬಿಟ್ಟರೂ ನೆಡಲಿಲ್ಲ ನೀಗಿಕೊಂಡ ನೆನಪ. ಅಜ್ಙಾತದವಸ್ಥೆಯ ನಟ್ಟ ನಡುವಲ್ಲೇ ನಿಲುಕಬೇಕು ನೀಲಾಂಜನನ ಕಾಲಾಂತರ ಥಿಯರಿ. ಬುಡ ಮಟ್ಟಸಮೇಲು ಮಾಡಿ ಬಿದ್ದಿತ್ತುತಾತ ಬಿತ್ತಿದ್ದ ಹುಣಸೆ. ಕಾದು ಕಾವಲಿಗಿರುತ್ತಿತ್ತು ಅಮ್ಮ ಹಚ್ಚಿಟ್ಟ ಹಣತೆ ಅಪ್ಪನ […]

read more
‘ಆರ್. ವಿ. ಭಂಡಾರಿ ನೆನಪು’ ಕಾರ್ಯಕ್ರಮದ ಒಂದು ನೋಟ..

‘ಆರ್. ವಿ. ಭಂಡಾರಿ ನೆನಪು’ ಕಾರ್ಯಕ್ರಮದ ಒಂದು ನೋಟ..

ಆರ್. ವಿ. ಭಂಡಾರಿಯವರು ನಮ್ಮನ್ನಗಲಿ ಮೂರು ವರುಷ ಕಳೆಯಿತು. ಈದಿನದ ನೆನಪಿನಲ್ಲಿ ಅವರ ಎರಡು ಪುಸ್ತಕಗಳ (ಚಿನ್ನದ ಹುಡುಗಿ ಚಿನ್ನಮ್ಮ,-ಮಕ್ಕಳ ಕಾದಂಬರಿ ಹಾಗೂ ಪ್ರೀತಿಯ ಕಾಳು-ಮಕ್ಕಳ ನಾಟಕ) ಬಿಡುಗಡೆ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮುದಾಯದ ರಾಜ್ಯ ಜತೆ ಕಾರ್ಯದರ್ಶಿಗಳು ಹಾಗೂ ಜನವಾದಿ ಮಹಿಳಾ ಸಂಘಟನೆಯ […]

read more
ಜೋಗಿ ಕವಿತೆ ‘ಇಂದು ಪತ್ರಿಕೆಗೆ ರಜೆ’

ಜೋಗಿ ಕವಿತೆ ‘ಇಂದು ಪತ್ರಿಕೆಗೆ ರಜೆ’

ದೇವರು ದೊಡ್ಡವನು ಇಂದು ಪತ್ರಿಕೆಗೆ ರಜೆ.   ತುಮಕೂರು ರಸ್ತೆಯಲ್ಲಿ ಬಸ್ಸು ಅಪಘಾತ ಆಗುವುದಿಲ್ಲ. ಮೈಸೂರು ರೋಡಿನಲ್ಲಿ ಸ್ಕೂಟರ್ ಡಿಕ್ಕಿಯಾಗಿ ವೃದ್ಧದಂಪತಿ ಸಾಯುವುದಿಲ್ಲ. ದರ್ಶನ್ ಥೇಟರಿಗೆ ಹೋದಾಗ ಅಭಿಮಾನಿಗಳು ಮುತ್ತಿಕೊಂಡು ಕಂಗೆಡಿಸುವುದಿಲ್ಲ. ಜೈಲಿನಲ್ಲಿರುವ ರಾಜಕೀಯ ನಾಯಕರಿಗೆ ಹುಟ್ಟೂರ ಮಣ್ಣು ತಂದು ಕೊಡುವವರಿಲ್ಲ […]

read more
ದೀಪಾವಳಿ – ಕೆಲ ಪದ್ಯಗಳು

ದೀಪಾವಳಿ – ಕೆಲ ಪದ್ಯಗಳು

-ಲಡಾಯಿ ಬಸು ೧ ಹಣತೆ ಸುಟ್ಟುಕೊಳ್ಳುವಾಗ ಲೋಕಕ್ಕೆ ಬೆಳಕಿನ ಸಂಭ್ರಮ ..! ೨ ನಿನಗೆ ಬೆಳಕಿನ ಅನುಭವವಾಗುವುದು ನೀನು ಹಣತೆಯಾದರಷ್ಟೇ  ..! ೩ ಹಣತೆ ಹಚ್ಚಿಟ್ಟವರ ಓಣಿಯಲ್ಲಿ ಸಂಚಾರವಿತ್ತು ಬರೀ ಚಾಳೀಸು ತೊಟ್ಟ ಕುರುಡರೇ ಎದುರಾದರು ..! ೪ ಇಡೀ ಇರುಳು ಪ್ರೇಮಿಸಿದ ಫಲವೆನ್ನುವ ಹಾಗೆ ಕತ್ತಲು ಬೆಳಕಾಗಿ ಮಾರ್ಪಟ್ಟಿತು ಹೆಚ್ಚೇನಿಲ್ಲ ಪ್ರೇಮಿಸುವದೆಂದರೆ ಕತ್ತಲನ್ನು ಬೆಳಕಾಗಿಸುವುದು ಇದು ಇರುಳಿನ ನೀತಿಪಾಠವಂತೂ ಅಲ್ಲ ..! ೫ ಸೂರ್ಯನಿರುವ ಹಗಲಿನಲ್ಲಿ ಹಣತೆ ಹಚ್ಚುವ ನಿನ್ನ  ಸಂಭ್ರಮಕೆ ಏನನ್ನಲಿ ? ಉರಿವ ಹಣತೆ ಹೇಳುವುದು ಇದನ್ನೇ ಸುಡದೆ ಬೆಳಕಾಗಲು […]

read more
ಸಹಯಾನಕ್ಕೆ ಸಹಿ

ಸಹಯಾನಕ್ಕೆ ಸಹಿ

ಆರ್. ವಿ. ಭಂಡಾರಿಯವರು ನಮ್ಮನ್ನಗಲಿ 3 ವರುಷ. ಅವರ ನೆನಪಿಗೆ – ವಿಷ್ಣು ನಾಯ್ಕ ಅವರು ಬರೆದಿರುವ ಈ ಕವಿತೆ — (ಡಾ. ಆರ್.ವಿ.ಭಂಡಾರಿ ಒಡನಾಟದ ಮೆಲುಕು) 1 ನಿನ್ನ `ಸಹಯಾನಕ್ಕೆ’ ಸಹಿಮಾಡಿದ ಖುಷಿಯಲ್ಲಿ ಬಂದಿರಲಿಲ್ಲ ನಿದ್ದೆ, ಕಾರಣ ಗೊತ್ತು ನಿನಗೇ! ಬಾಗಿಲು […]

read more
ಸಹಸ್ರ ನಾಲಗೆ..

ಸಹಸ್ರ ನಾಲಗೆ..

-ದಿನೇಶ್ ಕುಮಾರ್ ಎಸ್.ಸಿ. ಕೃಪೆ-‘ದೇಸೀಮಾತು‘ ತುಟಿ ಹೊಲೆದುಕೊಂಡಿದ್ದಾಗ ಹೃದಯಕ್ಕೆ ಸಾವಿರ ನಾಲಗೆ ಚಿಮ್ಮುತ್ತದೆ. -ರೂಮಿ ಅಲ್ಲೋ ರೂಮಿ ತುಟಿ ಹೊಲೆದುಕೊಳ್ಳೋದೇನೋ ಸುಲಭ ಹೃದಯದ ನಾಲಗೆಯ ಮಾತುಗಳಿಗೆ ಕಿವುಡಾಗೋದು ಹೇಗೆ? ನಿನಗೋ ಶಂಸ್‌ನ ಕನವರಿಕೆ ಎದೆಯಲ್ಲಿ ಧಗಧಗನೆ ಉರಿಯುವ ಪ್ರೇಮ ತುಟಿ ನೀನೇ […]

read more
ನೊಬೆಲ್‌ ಪ್ರಶಸ್ತಿ ವಿಜೇತ ತ್ರಾನ್ಸ್‌ತೋಮರ್‌ ನ ಎರಡು ಕವನಗಳು..

ನೊಬೆಲ್‌ ಪ್ರಶಸ್ತಿ ವಿಜೇತ ತ್ರಾನ್ಸ್‌ತೋಮರ್‌ ನ ಎರಡು ಕವನಗಳು..

-ವಿಜಯರಾಘವನ್ ರಾಮ್ ಕುಮಾರ್ ದಿ ಗ್ರೇಟ್‌ ಎನಿಗ್ಮಾ ತ್ರಾನ್ಸ್‌ತೋಮರ್‌ನ  ಹೊಸ ಕವಿತೆಗಳ ಸಂಕಲನ. ಯಾರೇ ಕುತೂಹಲಿ ಓದುಗನಿಗೆ ಇದು ಖಂಡಿತವಾಗಿಯೂ ಅವನ ಓದಿನ ಆರಂಭವಾಗಲು ತಕ್ಕುದಾದುದು. ಮೊದಲ ಓದಿಗೇ ಹೊಳೆಯುವುದು ತ್ರಾನ್ಸ್‌ತೋಮರ್‌ನ ಕೃತಿಯ  ಉತ್ಕಟವಾದ ಮತ್ತು ಸುಂದರವಾದ ನಿಶ್ಚಲತೆ. ಅವನಲ್ಲಿ ಪದಗಳು […]

read more
‘ಬಾಪೂ ನಮನ’ ಕವಿತೆಗಳ ಆಹ್ವಾನ

‘ಬಾಪೂ ನಮನ’ ಕವಿತೆಗಳ ಆಹ್ವಾನ

‘ಗಾಂಧಿ’ ನಮ್ಮ ನಾಡಿನ ಸಾಕ್ಷಿಪ್ರಜ್ಞೆಯಂತೆ ಮತ್ತೆ ಮತ್ತೆ ನಮ್ಮನೆಚ್ಚರಿಸುವ, ಕಾಡಿಸುವ ಒಳ ಬೆಳಕು. ಸೂಕ್ಷ್ಮತೆಯುಳ್ಳ ಪ್ರತಿಯೊಬ್ಬ ನಾಡಿನ ಹಿತಚಿಂತಕ, ಸಾಹಿತಿ, ಕವಿ ಗಾಂಧಿಯೊಂದಿಗೆ ಅನುಸಂಧಾನಿಸಿದ್ದಾರೆ, ಮುಖಾಮುಖಿಯಾಗಿದ್ದಾರೆ. ಪ್ರಶ್ನಿಸಿಕೊಳ್ಳುತ್ತಾ, ಎಚ್ಚರಿಸಿಕೊಳ್ಳುತ್ತಾ ತಮ್ಮನ್ನು ತಾವೇ ನಿಕಷಕ್ಕೊಡ್ಡಿಕೊಂಡಿದ್ದಾರೆ. ಹೀಗೆ ‘ಗಾಂಧಿ’ ಯನ್ನು ವಸ್ತುವಾಗುಳ್ಳ ಕವಿತೆ ರಚಿಸಿರುವ […]

read more
ನರೇಶ್ ಮಯ್ಯ ಕವಿತೆ: ಅಂಗ ಭಂಗದ ಅನಂಗ ಸಂಗ..

ನರೇಶ್ ಮಯ್ಯ ಕವಿತೆ: ಅಂಗ ಭಂಗದ ಅನಂಗ ಸಂಗ..

-ನರೇಶ್ ಮಯ್ಯ ನೇಹಿಗನ ನೆನಪಿನ ನೊಗ ಹೊತ್ತು ನಡೆದಿದ್ದೇನೆ. ಆಗರ್ಭ ಆಲಿಂಗನದೊಂದಿಗೆ ಸಂಗ ತೊರೆದಿದ್ದೆವಲ್ಲ; ಹಿಂಗೇ ಅಂಗ-ಭಂಗ ಅನಂಗ ರಾತ್ರಿಯ ಅವಾಂತರ ಅರಿತೆದ್ದೇಳಿದ್ದೇ ತಡ ನಡೆದಿದ್ದೆ ನಾಕದ ಯಾನಕ್ಕೆ, ನರಕ-ಪುಲಕಗಳನ್ನೊತ್ತ ನವ್ಯನೌಕೆಯ ಸನಿಹಕ್ಕೆ.   ತೇಲು ತೇಲುತ್ತ ಲೋಲುಪತೆಯ ಲೋಕದೊಳಗೆ ಲೀನವಾಗುತ್ತೆ, […]

read more
ಧಾರವಾಡದಲ್ಲಿ ಸಾಹಿತ್ಯ ಕಮ್ಮಟ..

ಧಾರವಾಡದಲ್ಲಿ ಸಾಹಿತ್ಯ ಕಮ್ಮಟ..

ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ (ರಿ) ಧಾರವಾಡ ಸಾಹಿತ್ಯ ಒಂದು ವ್ಯಕ್ತಿತ್ವವನ್ನು ತನ್ಮೂಲಕ ಸಮುದಾಯದ ಒಟ್ಟಂದವನ್ನು ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಮಾಜದ ಎಲ್ಲ ಅಂಗಗಳು ಶಿಥಿಲಗೊಂಡಿರುವ ಈ ದಿನಗಳಲ್ಲಿ ಬರಹಗಾರರು ತುಂಬ ಎಚ್ಚರಿಕೆಯಿಂದ ತಮ್ಮ ಪ್ರಜ್ಞೆಯನ್ನು ಕಟ್ಟಿಕೊಳ್ಳುವುದು ಇಂದಿನ […]

read more
ರೂಪಕಗಳ ರೂಪ ಬದಲಾಗಬೇಕಿದೆ!..

ರೂಪಕಗಳ ರೂಪ ಬದಲಾಗಬೇಕಿದೆ!..

–ರಾಘವೇಂದ್ರ ಜೋಶಿ ಕನಸು-ಕನವರಿಕೆ ರೋಮಾಂಚನ ತರದ ಪ್ರಯಾಣವಿದು ಸರಕಾರಿ ಬಸ್ಸಿಗೆ ವೇಗವಿಲ್ಲ ಕಿಟಕಿಯಲ್ಲಿ ಗಾಳಿಯಿಲ್ಲ ಪದಬಂಧದಲ್ಲೂ ಮನಸ್ಸಿಲ್ಲ. ಸುಂದರಿ ಬಂದು ಪಕ್ಕದಲ್ಲಿ ಪವಡಿಸಿದ್ದೇ ತಡ; ಬಸ್ಸಿಗೂ ಮನಸಿಗೂ ನಾಗಾಲೋಟ! ವೇಗ ಹೆಚ್ಚಿದಂತೆ ಹಾದಿಬದಿಯ ಕರೆಂಟ್ ತಂತಿಗಳು ಭ್ರಮೆ ಹುಟ್ಟಿಸಿ ಸಂಭ್ರಮಿಸುತ್ತವೆ: ಒಂದಕ್ಕೊಂದು […]

read more
— ದಸರಾ  ನಿನ್ನಾಲ್ಕ ಉಧೋ ಉಧೋ

— ದಸರಾ ನಿನ್ನಾಲ್ಕ ಉಧೋ ಉಧೋ

-ಸುಬ್ರಾಯ  ಮತ್ತೀಹಳ್ಳಿ ಹಸಿರು ತೇರನ್ನೇರುತೀಯಂತೆ ವರ್ಷವರ್ಷವೂ ಬರುತೀಯಂತೆ                        1 ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ ಸ್ವರ್ಗವ ಧರೆಗೆ ತರುತೀಯಂತೆ ದಸರೇ-ಇದು ನಿನ್ನ ಹೆಸರೇ—? ಇವನಮ್ಮ  ಅವನಮ್ಮ […]

read more
ರಾಜು ಹೆಗಡೆ ಕವಿತೆ-‘ನಡು ವಯಸ್ಸು’

ರಾಜು ಹೆಗಡೆ ಕವಿತೆ-‘ನಡು ವಯಸ್ಸು’

– -ರಾಜು ಹೆಗಡೆ.. ಕನಸು ಕಾಣುತ್ತಿದ್ದ ಹುಡುಗನಿಗೆ ಕೂದಲು ಹಣ್ಣಾಗಿದೆ ಹೊತ್ತು ಗೊತ್ತಿಲ್ಲದೆ ಹೊಗುತ್ತಿದ್ದ ಹುಡುಗಿಯರು ಅಂಕಲ್ ಎಂದು ಆಚೆ ನಡೆಯುತ್ತಾರೆ ಏಜಾದವರು ಮಾತ್ರ ಪ್ರೀತಿಯೊ ವಿಶ್ವಾಸವೊ ಮುಗುಳು ನಗುತ್ತಾರೆ ಮರಗಿಡಗಳು ಪ್ರತಿ ವಸಂತದಲ್ಲೂ ಹೂ ಅಗಲಿಸಿ ದುಂಬಿಯ ಜತೆ ಗುಣಗುಡುತ್ತವೆ […]

read more
ಇರುಳ -ಬೆಳಕಿನ ಸೊಲ್ಲು – ೨

ಇರುಳ -ಬೆಳಕಿನ ಸೊಲ್ಲು – ೨

-ಲಡಾಯಿ ಬಸು ೧ ಬೆಳಕಿದ್ದಾಗ ಲೋಕ ನನ್ನನ್ನಷ್ಟೇಯಲ್ಲ ನನ್ನ ನೆರಳನ್ನೂ ಗುರುತಿಸಿತು ಕತ್ತಲಾಯಿತು ನೋಡಿ ಲೋಕದ ಕಣ್ಣಿಗೆ ನನ್ನ ನೆರಳಲ್ಲ ನಾನೂ ಕಾಣದಾದೆನು ೨ ಹಗಲಿನಲಿ ದಾಟಲಾಗದ ಗಡಿಗಳನು ಇರುಳು ದಾಟಿದೆ ಏನು ಮಾಡಲಿ ಪ್ರೀತಿ ಇರುವುದು ಬದನಾಮ ರಸ್ತೆಯಲ್ಲೇ ..! […]

read more
ಚಂದ್ರಶೇಖರ ಕಂಬಾರರ ಕವಿತೆ: ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ?

ಚಂದ್ರಶೇಖರ ಕಂಬಾರರ ಕವಿತೆ: ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ?

-ಚಂದ್ರಶೇಖರ ಕಂಬಾರ ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ? ಗಂಧ ಲೇಪನವ್ಯಾತಕೆ? -ಈ ದೇಹಕೆ..   ಮಂದ ಮಾರುತ ಮೈಗೆ ಬಿಸಿಯಾದವೇ ತಾಯಿ? ಬೆಳುದಿಂಗಳು ಉರಿವ ಬಿಸಿಲಾಯಿತೆ ನನಗೆ? ಹೂಜಾಜಿ ಸೂಜಿಯ ಹಾಗೆ -ಚುಚ್ಚುತಲಿವೆ.. ಉರಿಗಳು ಮೂಡ್ಯಾವು ನಿಡುಸುಯ್ಲಿನೊಳಗೆ ಉಸಿರಿನ ಬಿಸಿ ಅವಗೆ ತಾಗದೇ […]

read more

ದ್ವಿಪದಿಗಳು..

-ಲಡಾಯಿ ಬಸು ೧ ಕತ್ತಲಲ್ಲಿ ಹಣತೆ ಹಚ್ಚುವ ದಡ್ದತನವಷ್ಟೇ ಜತೆಯಲ್ಲಿತ್ತು ಬೆಳಕಿನ ಬಗ್ಗೆ ಉದ್ದುದ್ದ ವ್ಯಾಖ್ಯಾನ  ಮಾಡುವುದು ನನಗೊಲಿಯಲಿಲ್ಲ ೨ ಅನಾಮಿಕ ಹಗಲಿನ ಸಮಯ ಮುಗಿದು ಹೇಗೋ ಸಂಜೆಯಾಗಿದೆ ಆದ ಗಾಯವೇ ಮಾಯ್ದಿಲ್ಲ ಇನ್ನೊಂದಕ್ಕೆ ತಯಾರಾಗು ಅಂದರೆ ಹೇಗೆ ..? ೩ […]

read more
ಇಂದು ಬಹುಭಾಷಾ ಕವಿಗೋಷ್ಠಿ ಮತ್ತು ವಿಚಾರಸಂಕಿರಣ..

ಇಂದು ಬಹುಭಾಷಾ ಕವಿಗೋಷ್ಠಿ ಮತ್ತು ವಿಚಾರಸಂಕಿರಣ..

read more

Pin It on Pinterest