BTV News ಪ್ರಕಾರ-
ಇದು ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸೋ ಮಹಾ ಸುದ್ಧಿ. ಕೊನೆಗೂ ಸಿಕ್ಕಿಬಿದ್ದ ಗೌರಿ ಲಂಕೇಶ್ ಹತ್ಯೆ ಕೇಸ್ ನ ರಣಹಂತಕ. ಪಿಸ್ತೂಲ್ ಸಮೇತ ಪೊಲೀಸರಿಗೆ ಸಿಕ್ಕಿ ಬಿದ್ದ ಪಾತಕಿ.
4 ದಿನಗಳ ಹಿಂದೆ ಸೆರೆಸಿಕ್ಕ ಹಂತಕ. ಸೆಪ್ಟೆಂಬರ್ 5 ರಂದು ಇದೇ ಹೊತ್ತಿಗೆ ಗೌರಿ ಹತ್ಯೆ ಮಾಡಿದ್ದ. ಇಷ್ಟು ದಿನ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸುತ್ತಿದ್ದ ಹಂತಕ. SIT ಅಧಿಕಾರಿ ಶ್ರೀಧರ್ ಪುಜಾರಿ ರಂಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ.
ಇಡೀ ದೇಶವನ್ನೇ ತಲ್ಲಣಗೊಳಿಸುವ ಮಹಾ ಸ್ಫೋಟಕ ಸುದ್ಧಿ. ಗೌರಿಯನ್ನ ಕೊಂದ ಮಹಾಹಂತಕ ಕರ್ನಾಟಕದವನ್ನು. ಗೌರಿ ಹತ್ಯೆಯ ಪ್ರಮುಖ ರೂವಾರಿ ಮಂಡ್ಯ ಜಿಲ್ಲೆಯ ಮದ್ದೂರಿನವನು. ಉತ್ತರ ಭಾರತದಿಂದ ಬಂದಿದ್ದ ಗೌರಿ ಹತ್ಯೆಯ ಕಿಲ್ಲರ್ಸ್. ಈ ಕಿಲ್ಲರ್ಸ್ ಗೆ ಆಶ್ರಯ ಕೊಟ್ಟಿದ್ದೇ ಮದ್ದೂರಿನ ಹೊಟ್ಟೆಮಂಜ ಅಲಿಯಾಸ್ ನವೀನ. ಕೊಳ್ಳೆಗಾಲದ ತೋಟದಲ್ಲಿ ಹಂತಕರಿಗೆ ಟ್ರೈನಿಂಗ್ ಮಾಡಿಸಿದ್ದ. ಈ ಹಂತಕರಿಗೆ ಊಟ ವಸತಿ ಸೇರಿದಂತೆ ಎಲ್ಲಾ ಸೌಲಭ್ಯ ನೀಡಿದ್ದ.
0 ಪ್ರತಿಕ್ರಿಯೆಗಳು