ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಆನೆಗೊಂದಿ ಉತ್ಸವದಲ್ಲಿ ಕವನ ವಾಚನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿ ಇಂದು ಗಂಗಾವತಿ ನ್ಯಾಯಾಲಯಕ್ಕೆ ಹಾಜರಾದರು.
ನ್ಯಾಯಾಲಯ ಫೆ.18ರ ಮಧ್ಯಾಹ್ನ 2 ಗಂಟೆವರೆಗೆ ಪೊಲೀಸ್ ವಶಕ್ಕೆ ನೀಡಿದೆ. ಮಧ್ಯಂತರ ಜಾಮೀನನ್ನು ನ್ಯಾಯಾಲಯ ತಿರಸ್ಕರಿಸಿದೆ.
ಕವಿತೆ ಬರೆದು ಓದಿದ್ದಕ್ಕೆ ಜೈಲು. ನಾವು ಯಾವ ಕಾಲದಲ್ಲಿದ್ದೇವೆ. ಬರೆಯುವ ಕವನ, ಕತೆ ಹೀಗೇ ಇರಬೇಕೆಂದು ಅದನ್ನಾದರೂ ಆಳುವ ಸರಕಾರ ಹೇಳಿ ಬಿಡಲಿ! ಬಿಜೆಪಿ ಸರಕಾರದ ಕೇಂದ್ರ ಹಾಗೂ ರಾಜ್ಯ ಸಚಿವರು, ಶಾಸಕರು ಮತ್ತು ಅವರ ಅಭಿಮಾನಿ ಭಟ್ಟಂಗಿಗಳು ಆಡುವ ಅನೈತಿಕ ಮಾತುಗಳಿಗೆ ದಂಡಿಸಬೇಕಾದ ನ್ಯಾಯಾಲಯಗಳು ಕುರುಡಾಗಿವೇ? ಎಂಬ ಸಂಶಯ ಕಾಡುತ್ತದೆ.