ಸಮುದ್ಯತಾ ಕಂಜರ್ಪಣೆ ಹೊಸ ಕವಿತೆ- ಸಿದ್ಧತೆ

ಸಮುದ್ಯತಾ ಕಂಜರ್ಪಣೆ

ನಿನ್ನೆ ಚಾಕಲೇಟು ನೀಡಿದ ಆಂಟಿ,
ಆಟವಾಡಲು ಕರೆದ ನೆರೆಬೀದಿಯ ಅಕ್ಕ,
ಕೆನ್ನೆ ಚಿವುಟಿದ ತಾತ
ಕಾಣಿಸಲಿಲ್ಲ ಇಂದು
ಕಲ್ಲು ಮಣ್ಣು ಧೂಳು ಬೆಂಕಿಯಷ್ಟೇ
ಬಾಗಿಲು ಕಿಟಕಿ ತೆಗೆದಾಗ ಕಂಡದ್ದು

ರಾತ್ರಿ ಹಗಲೆನ್ನದೆ ತುಂಬಿದ ಚೀರಾಟ
ಕತ್ತಲಲ್ಲೂ ಬೀದಿಯೆಲ್ಲ ಹೊಳೆಯುವಷ್ಟು
ಬೆಂಕಿಯ ಜ್ವಾಲೆ

ಕಿಟಕಿಯಿಂದ ಇಣುಕಿ ನೋಡುತ್ತಿತ್ತು
ಮಗು..
ಮುರಿದ ಸೈಕಲ್, ಟೆಡ್ಡಿಬೇರಿನ ಕತ್ತಿನ ರಿಬ್ಬನ್, ಸುಟ್ಟ ಕಾರಿನ ಚಕ್ರ ಜೊತೆಗೆ ಉರಿಯುತ್ತಿದ್ದ ಕೈ ಕಾಲು ಸಹ..
ಬಾ ಒಳಗೆ… ಮಗುವ ಕರೆದು ಕಿಟಕಿ ಮುಚ್ಚಿದಳು ಅಮ್ಮ..
ನಿಟ್ಟುಸಿರು ದಿನ ನಿತ್ಯದ ಕತೆ…

ಒಪ್ಪ ಓರಣವಾದ ಕೋಣೆ,
ಜೋಡಿಸಿಟ್ಟ ಬಣ್ಣದ ಪೆನ್ಸಿಲ್ಲುಗಳು
ಮಂಚದ ಮೇಲೆ ಸಾಲಾಗಿ ಕೂತ ಗೊಂಬೆಗಳು
ಚೀಲದಲಿ ತುಂಬಿದ್ದ ಗೊಂಬೆ ಬಟ್ಟೆಗಳು

ಏನಿವತ್ತು..? ಎಲ್ಲ ಜೋಡಿಸಿದ್ದೀ ?
ಗೊಂಬೆಗಳ ನಡುವೆ ಕುಳಿತ
ಗೊಂಬೆಯ ಕೇಳಿದಳು ಅಮ್ಮ..

ಪ್ಯಾಕಿಂಗ್ ಮಾಡುತ್ತಿದ್ದ ಮಗು ತಿರುಗಿ ಹೇಳಿತು…
ನೀನೂ ಎಲ್ಲ ಒಂದೇ ಕಡೆ ಜೋಡಿಸ್ಕೋ…
ನಾಳೆ ನಮ್ಮ ಮನೆಯಲ್ಲೂ
ಕಲ್ಲು ಮಣ್ಣು ಧೂಳಿನ ನಡುವೆ
ಆಟ ಸಾಮಾನು ಕಳೆದು ಹೋದರೆ
ಹುಡುಕೋದು ಹೇಗೆ…?

‍ಲೇಖಕರು Avadhi

May 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vasundhara k m

    ಓ…!! ಮಕ್ಕಳನ್ನೂ ತಟ್ಟಿದ ತಲ್ಲಣ.. ಸೂಕ್ಷ್ಮವಾಗಿ ಕಟ್ಟಿರುವಿರಿ ಕವಿತೆಯನ್ನು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: