ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮೈತ್ರಿ ಸಂಭ್ರಮ’ದ ಫೋಟೋ ಆಲ್ಬಂ…

ಮೈತ್ರಿ ಪ್ರಕಾಶನ ಸಂಸ್ಥೆಯ 2021ರ ಸಾಲಿನ ಪುಸ್ತಕ ಬಹುಮಾನ ಹಾಗೂ ಹಲವು ಕೃತಿಗಳ ಬಿಡುಗಡೆಯನ್ನು ಈ ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

‘ಒಂದು ಇಡಿಯ ಬಳಪ’ ಹಸ್ತಪ್ರತಿಗಾಗಿ ಬಹುಮಾನ ಗೆದ್ದ ಸುಧಾ ಆಡುಕಳ ಅವರಿಗೆ ಪ್ರಶಸ್ತಿ ವಿತರಣೆಯನ್ನು ಖ್ಯಾತ ಲೇಖಕಿ ಭುವನೇಶ್ವರಿ ಹೆಗಡೆ ಅವರು ಮಾಡಿದರು.

ಮೇಜರ್‌ ಡಾ. ಕುಶ್ವಂತ್‌ ಕೋಳಿಬೈಲು ಅವರ ʻಕೂರ್ಗ್‌ ರೆಜಿಮೆಂಟ್‌’, ಗುರುಪ್ರಸಾದ ಕುರ್ತಕೋಟಿ ಅವರ ʻಕೇಶ ಕ್ಷಾಮʼ, ಸುಧಾ ಆಡುಕಳ ಅವರ ʻಒಂದು ಇಡಿಯ ಬಳಪʼ, ಅಂಜನಾ ಹೆಗಡೆ ಅವರ ʻಹೂ ನಗೆʼ, ಟಿ. ಎಸ್.‌ ಶ್ರವಣಕುಮಾರಿಯವರ ʻಸಂಜೆಯ ಮಳೆʼ ಹೀಗೆ ಐದು ಪುಸ್ತಕಗಳು ಬಿಡುಗಡೆಗೊಂಡವು.

ಸಮಾರಂಭದಲ್ಲಿ ಜಿ ಎನ್‌ ಮೋಹನ್‌, ಮೇಘನಾ ಸುಧೀಂದ್ರ ಮುಖ್ಯ ಅತಿಥಿಗಳಾಗಿದ್ದರು. ಪ್ರಕಾಶಕರಾದ ಉಮೇಶ್ ಹಾಗೂ ಅಂಜಲಿ ದೇಸಾಯಿ ಅವರ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಛಾಯಾಗ್ರಾಹಕ ವೆಂಕಟೇಶ್ ಮೂರ್ತಿ ಅವರು ಕಂಡಂತೆ ಪುಸ್ತಕಗಳ ಬಿಡುಗಡೆ ಸಮಾರಂಭದ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು Avadhi

20 April, 2021

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. T S SHRAVANA KUMARI

    ಸಮಾರಂಭವು ಚೆನ್ನಾಗಿ ಮೂಡಿಬಂತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading