ಶ್ಯಾಮಲಾ ಮಾಧವ
ಮುಂಬೈನಲ್ಲಿ ಉರಿಬಿಸಿಲ ಧಗೆ ಕೆಂಡ ಸುರಿಸಿದಂತಿದೆ.
ಆ ಸುಡು ಬಿಸಿಲಲ್ಲಿ ರಾಜ್ಯಾದ್ಯಂತದಿಂದ ಸಾವಿರ ಸಾವಿರ ರೈತರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಂತ್ರಾಲಯದತ್ತ ಮೌನ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದಾರೆ.
ಮುಲುಂದ್ ಹೈವೇಯಲ್ಲಿ ಮೋರ್ಚಾ ಎದುರಾದಾಗ ಉತ್ಸಾಹ ಉಕ್ಕಿದರೂ, ಸಂಚಾರ ಡೈವರ್ಟಾದ ಕಾರಣ ನೋಡಲು ಸಿಗದೇ ಹೋಯ್ತು
ಕೆಂಡ ಸುರಿಯುವಂತಹ ಆಗಸದ ಕೆಳಗೆ ಈ ನಮ್ಮ ಅನ್ನದಾತರು ಕೆಂಪು ಪತಾಕೆಗಳನ್ನು ಹಿಡಿದು ಯಜ್ಞಾಗ್ನಿಯಂತೆ ಸಾಗಿ ಹೋಗುತ್ತಿದ್ದರೆ ನಾನು ಮನೆ ಸೇರಿಯೂ ಬೇಯುತ್ತಿದ್ದೆ.
ಇಂದು ಸ್ಯಾನ್ ಬಯಲಲ್ಲಿ ತಂಗಿ ನಾಳೆ ಪರೀಕ್ಷೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗದಂತೆ ಮುಂಜಾವ ಕ್ಕೇ ಮಂತ್ರಾಲಯದತ್ತ ಸಾಗುವ , ನಾಲ್ಕು ದಿನಗಳಿಂದ ಮೌನನಡೆ ನಡೆದಿರುವ ಈ ನಮ್ಮ ರೈತ ಬಂಧುಗಳ ಬೇಡಿಕೆ ಈಡೇರಲಿ. ಕಷ್ಟಗಳು ಪರಿಹಾರವಾಗಲಿ
0 ಪ್ರತಿಕ್ರಿಯೆಗಳು